Advertisement

ಹೊಂಡಕ್ಕೆ ಟ್ಯಾಂಕರ್‌ ಪಲ್ಟಿ: ತಾಳೆ ಎಣ್ಣೆ ಸೋರಿಕೆ

08:50 AM Sep 06, 2017 | Harsha Rao |

ಕುಂದಾಪುರ: ಹುಣ್ಸೆಕಟ್ಟೆ ಸೇತುವೆಯ ಬಳಿ ಸೋಮವಾರ ರಾತ್ರಿ ಪಾಮೋಲಿನ್‌(ತಾಳೆ)ಎಣ್ಣೆಯನ್ನು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್‌ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಟ್ಯಾಂಕರ್‌ನಲ್ಲಿದ್ದ ಸುಮಾರು 25 ಸಾವಿರ ಲೀಟರ್‌ ಪಾಮೊಲಿನ್‌ ಸೋರಿಕೆಯಾಗಿ ಲಕ್ಷಾಂತರ ರೂ.ನಷ್ಠವಾಗಿದೆ.

Advertisement

ಮಂಗಳೂರಿನಿಂದ ಹಾವೇರಿಗೆ ಪಾಮೋಲಿನ್‌ ಎಣ್ಣೆಯನ್ನು ಸಾಗಿಸುತ್ತಿದ್ದ  ಟ್ಯಾಂಕರ್‌ ಸೇತುವೆಯ ಬಳಿ ವಾಹನವೊಂದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಬಲ ಭಾಗದ ಹೊಂಡಕ್ಕೆ ಉರುಳಿದೆ. ಚಾಲಕ ಚಿತ್ರದುರ್ಗದ ರಾಜು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಟ್ಯಾಂಕರ್‌ ಪಲ್ಟಿಯಾಗಿ ಎಣ್ಣೆ ಸೋರಿಕೆಯಾ ಗುತ್ತಿರುವ  ಸುದ್ಧಿ ತಿಳಿದ ಸ್ಥಳೀಯರು ಗುಂಪು ಗುಂಪಾಗಿ ಕ್ಯಾನ್‌ಗಳನ್ನು ಹಿಡಿದು ಬಂದು ಎಣ್ಣೆಯನ್ನು ತುಂಬಿ ಮನೆಗಳಿಗೆ ಒಯ್ದರು. ಸಂಜೆ ಹೊತ್ತಿಗೆ ಇನ್ನೊಂದು ಟ್ಯಾಂಕರ್‌ನ್ನು ತರಿಸಿ ಉಳಿದ ಪಾಮೋಲಿನ್‌ ಎಣ್ಣೆಯನ್ನು ತುಂಬಿಸಿಕೊಳ್ಳಲಾಯಿತು. ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next