Advertisement

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಟ್ಯಾಂಕರ್: ಸವಾರ ಸ್ಥಳದಲ್ಲೇ ಸಾವು

10:48 AM Feb 07, 2021 | Team Udayavani |

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಡ್ಕ ಪೇಟೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

Advertisement

ಮೃತಪಟ್ಟ ಸವಾರನನ್ನು ಕಲ್ಲಡ್ಕದ ಬಿಕೆ ನಗರ ನಿವಾಸಿ ಹಿಮಾದ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ

ಮಂಗಳೂರು ಕಡೆಯಿಂದ ಅತೀವೇಗವಾಗಿ ಬಂದ ಟ್ಯಾಂಕರ್ ಸ್ಕೂಟರ್ ಸವಾರನಿಗೆ ಢಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.  ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next