Advertisement

ಚಾರ್ಮಾಡಿ ಘಾಟ್: ಕೆಟ್ಟು ನಿಂತ ಇಂಧನ ಟ್ಯಾಂಕರ್ – ಅಂತರ್ ಜಿಲ್ಲಾ ಪ್ರಯಾಣಿಕರ ಪರದಾಟ

07:54 AM Jul 20, 2022 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟ್ 10 ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ನಿಂತು ರಾತ್ರಿ ಬೆಂಗಳೂರು ಮತ್ತಿತರ ಕಡೆ ಸಂಚರಿಸುವ ನೂರಾರು ಬಸ್ಸ್ ಗಳು ಸಾಲು ಗಟ್ಟಿ ನಿಂತವು ಘಟನೆ ಮಂಗಳವಾರ ರಾತ್ರಿ 8:30 ರ ಸುಮಾರಿಗೆ ನಡೆದಿದೆ.

Advertisement

ಬೆಳ್ತಂಗಡಿ ಹೊಯ್ಸಳಕ್ಕೆ ಬಂದ ದೂರಿನಂತೆ ಕರ್ತವ್ಯ ನಿರತ ಪಿಎಸ್ ವೆಂಕಪ್ಪ ಮತ್ತು ಬಸವರಾಜ್ ಕೂಡಲೇ ಸ್ಥಳಕ್ಕೆ ಹೋಗಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿಯಲ್ಲಿ ಇತರ ವಾಹನಗಳನ್ನು ನಿಯಂತ್ರಿಸಿ ಬಸ್ ಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ನಂತರ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಸಂಚಾರ ಠಾಣಾ ಪಿಎಸ್ಐ ಓಡಿಯಪ್ಪ,  ಶಿವರಾಮ ರೈ ಕುಮಾರ್ ಅವರು ಕ್ರೇನ್ ತರಿಸಿ ಟ್ಯಾಂಕರ್ ನ್ನು ತೆರವುಗೊಳಿಸಿ ಬೆಳಗ್ಗೆ 5ಗಂಟೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ರಾತ್ರಿ ಪೂರ್ತಿ ಅಂತರ್ಜಿಲ್ಲೆ ಪ್ರವೇಶಿಸುವ ವಾಹನಗಳು ಘಾಟ್ ಪ್ರದೇಶದಲ್ಲಿ ನಿಲ್ಲುವಂತಾಯಿತು. ನೆಟ್ ವರ್ಕ್ ಇಲ್ಲದೆ ಸವಾರರು ಪರದಾಡುವಂತಾಗಿತ್ತು. ಮುಂಜಾನೆ ಟ್ರಾಫಿಕ್ ಸಮಸ್ಯೆ ಬಗೆಹರಿದಿದ್ದರಿಂದ ಸದ್ಯ ಸಂಚಾರ ದಟ್ಟಣೆ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next