Advertisement

ವಣ್ಣಿಯಾರ್‌ಗೆ ಮೀಸಲು ರದ್ದುಗೊಳಿಸಿದ ಸುಪ್ರೀಂ

11:33 PM Mar 31, 2022 | Team Udayavani |

ಹೊಸದಿಲ್ಲಿ/ಚೆನ್ನೈ: ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ)ಕ್ಕೆ ಸೇರಿರುವ ವಣ್ಣಿಯಾರ್‌ ಸಮುದಾಯಕ್ಕೆ ನೀಡಲಾಗಿರುವ ಶೇ.10.5 ಮೀಸಲು ವ್ಯವಸ್ಥೆ ಯನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದು ಗೊಳಿಸಿದೆ.

Advertisement

ನ್ಯಾ| ಎಲ್‌.ನಾಗೇಶ್ವರ ರಾವ್‌ ಮತ್ತು ನ್ಯಾ| ಬಿ.ಆರ್‌.ಗವಾಯಿ ಅವರನ್ನೊಳಗೊಂಡ ನ್ಯಾಯ ಪೀಠ ಮೀಸಲು ವ್ಯವಸ್ಥೆಯನ್ನು ರದ್ದುಗೊಳಿಸಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದಿದೆ.

ವಣ್ಣಿಕುಲ ಕ್ಷತ್ರಿಯ ಸಮುದಾಯವನ್ನು ತಮಿಳುನಾಡಿ ನ ಅತ್ಯಂತ ಹಿಂದುಳಿದಿರುವ (ಎಂಬಿಸಿ)115 ಸಮು ದಾಯಗಳಿಗಿಂತ ಭಿನ್ನವಾಗಿ ಕಾಣುವ ಬಗ್ಗೆ ಸಮರ್ಥನೆಯಲ್ಲಿ ಅರ್ಥವಿಲ್ಲ. ಹೀಗಾಗಿ 2021ರಲ್ಲಿ ಜಾರಿಗೊಳಿಸಿದ ಕಾಯ್ದೆ ಸಂವಿಧಾನದ 14,15 ಮತ್ತು 16ನೇ ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next