Advertisement

ಎಸ್‌ಸಿ ಸಮುದಾಯದ ವ್ಯಕ್ತಿಗೆ ದೇಗುಲ ಪ್ರವೇಶಕ್ಕೆ ಸಿಗದ ಅವಕಾಶ

06:50 PM Sep 06, 2022 | Team Udayavani |

ಚೆನ್ನೈ: ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇಗುಲದಲ್ಲಿ ಎಸ್‌ಸಿ ಸಮುದಾಯದ ವ್ಯಕ್ತಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.

Advertisement

ಜಿಲ್ಲೆಯ ಮುಸಿರಿ ತಾಲೂಕಿನ ಸಿಟ್ಟಿಲರಿ ಗ್ರಾಮದಲ್ಲಿ ಇರುವ ಮಹಾಮಾರಿಯಮ್ಮ ದೇಗುಲದಲ್ಲಿ ಎಸ್‌ಸಿ ಸಮುದಾಯದವರಿಗೆ ಪ್ರವೇಶ ನಿರಾಕರಿಸಲಾಗಿದೆ.

ಇದನ್ನೂ ಓದಿ:ರಾತ್ರಿ ಗ್ರೀನ್‌ ಟೀ ಕುಡಿಯುತ್ತೀರಾ?: ಆರೋಗ್ಯದ ಮೇಲೆ ಅಡ್ಡಪರಿಣಾಮ ಖಚಿತ!

ಪಿ.ಮುರುಗಪ್ಪನ್‌ ಎಂಬುವರು ದೇಗುಲ ಪ್ರವೇಶ ನಿರಾಕರಣೆ ವಿರುದ್ಧ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆ ನಡೆದು, ಎಸ್‌ಸಿ ಸಮುದಾಯದವರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಪು ಪ್ರಕಟವಾಗಿತ್ತು. ಇದರ ಹೊರತಾಗಿಯೂ ಕೂಡ ಪ್ರವೇಶ ನಿರಾಕರಿಸಲಾಗಿದೆ ಎಂದು ಮುರುಗಪ್ಪನ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next