Advertisement

ಚೆನ್ನೈ: ಬಿಜೆಪಿ ಮುಖಂಡ‌ ಗಲಾಟೆ

10:06 AM Sep 17, 2018 | Team Udayavani |

ಚೆನ್ನೈ: ತಮಿಳುನಾಡಿನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌. ರಾಜಾ ಅವರು ಗಣೇಶ ವಿಗ್ರಹ ವಿಸರ್ಜನೆ ವೇಳೆ ಪೊಲೀಸರೊಂದಿಗೆ ಜಗಳಕ್ಕಿಳಿದಿದ್ದು ಹಾಗೂ ನ್ಯಾಯಾಂಗವನ್ನು ನಿಂದಿಸಿದ್ದು ವಿವಾದಕ್ಕೀಡಾಗಿದೆ.

Advertisement

ಪುದುಕೊಟ್ಟೈಯಲ್ಲಿ ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ರೇಗಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿಂದೆ ಇವರ ಹೇಳಿಕೆಗಳು ವಿವಾದ ಎಬ್ಬಿಸಿದ್ದವು. ಇನ್ನೊಂದೆಡೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಎಂಕೆ ಆಗ್ರಹಿಸಿದೆ.
ನಿರ್ದಿಷ್ಟ ಮಾರ್ಗದಲ್ಲಿ ಗಣೇಶ ವಿಸರ್ಜನೆ ಯಾತ್ರೆ ತೆರಳಲು ಪೊಲೀಸರು ಅನುಮತಿ ನೀಡದ್ದಕ್ಕೆ ರಾಜಾ ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಹಿಂದೂ ವಿರೋಧಿಗಳು ಹಾಗೂ ಭ್ರಷ್ಟರು ಎಂದು ರಾಜಾ ಕಿಡಿಕಾರಿದ್ದಾರೆ. ವೀಡಿಯೋ ವೈರಲ್‌ ಆದ ಬಳಿಕ, ತಮಿಳುನಾಡು ಪೊಲೀಸರು ಎಚ್‌. ರಾಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next