Advertisement

ತಮಿಳುನಾಡು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ, ಶಾಂತಿಯುತ ಬಂದ್‌

10:07 AM May 26, 2018 | Harsha Rao |

ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸ್‌ ಗೋಲಿಬಾರ್‌ ಖಂಡಿಸಿ ಡಿಎಂಕೆ ನೇತೃತ್ವದ ವಿಪಕ್ಷಗಳು ಶುಕ್ರವಾರ ಕರೆ ನೀಡಿದ್ದ ಬಂದ್‌ ಶಾಂತಿಯು ತವಾಗಿಯೇ ಮುಕ್ತಾಯವಾಗಿದೆ. 13 ಮಂದಿ ಬಲಿಯಾದ ಘಟನೆಗೆ ತಮಿಳುನಾಡು ಸರ್ಕಾರವೇ ಕಾರಣ ಎಂದು ಆರೋಪಿಸಿ ವಿಪಕ್ಷಗಳು ದೂರಿವೆ.  ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ.

Advertisement

ತಮಿಳುನಾಡು ಹಾಗೂ ಪಾಂಡೀಚೇರಿಗಳಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್‌ ಸೇರಿ ಮೈತ್ರಿ ಪಕ್ಷಗಳು ಬಂದ್‌ಗೆ ಕೈಜೋಡಿಸಿದ್ದವು. ಬಸ್‌, ಆಟೋ, ಟ್ಯಾಕ್ಸಿ ಹಾಗೂ ರೈಲ್ವೆ ಸೇವೆಗಳು ಎಂದಿನಂತೆ ಕಾರ್ಯಾಚರಿಸಿದವು. ಬ್ಯಾಂಕ್‌, ಹೋಟೆಲ್‌ ಹಾಗೂ ವಾಣಿಜ್ಯೋದ್ಯಮಗಳೂ ಬಂದ್‌ ಬೆಂಬಲಿಸಿ ವ್ಯವಹಾರ ನಡೆಸಿವೆ. ತೂತುಕುಡಿಯಲ್ಲಿ ಶುಕ್ರವಾರವೂ ಸಣ್ಣ ಪ್ರಮಾಣದಲ್ಲಿ ಹಿಂಸಾಚಾರ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು.

ಎನ್‌ಎಚ್‌ಆರ್‌ಸಿ ನಿರ್ಧರಿಸಲಿ: ತೂತುಕುಡಿಯಲ್ಲಿ ನಡೆದ ಗೋಲಿಬಾರ್‌ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ನಿರ್ಧರಿಸಲಿ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಗೋಲಿಬಾರ್‌ ವೇಳೆ ಸಂಭವಿಸಿದ ಜೀವಹಾನಿ ಪ್ರಶ್ನಿಸಿ ತಮಿಳುನಾಡು ಮೂಲದ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಎನ್‌ಎಚ್‌ಆರ್‌ಸಿ ಮೇ 29ರಂದು ಅರ್ಜಿ ವಿಚಾರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next