Advertisement

ಸೂರಪ್ಪ ನೇಮಕಾತಿ ಪಾರದರ್ಶಕ: ರಾಜ್ಯಪಾಲ

06:40 AM Apr 08, 2018 | |

ಚೆನ್ನೈ: ಕನ್ನಡಿಗರಾದ ಪ್ರೊ. ಸೂರಪ್ಪ ಅವರನ್ನು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸಿರುವ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಇದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ತಿಳಿಸಿದ್ದಾರೆ. 

Advertisement

ಸೂರಪ್ಪ ಅವರ ಕರ್ನಾಟಕ ಮೂಲವು ಅಲ್ಲಿ ರಾಜಕೀಯ ಟೀಕೆಗೆ ಕಾರಣವಾಗಿತ್ತು. ಪ್ರಮುಖ ವಿಪಕ್ಷ ಡಿಎಂಕೆ ಸೇರಿದಂತೆ,
ಸೂರಪ್ಪ ಅವರ ನೇಮಕಾತಿ ಆದೇಶ ಹಿಂಪಡೆದು ಅವರ ಬದಲು ತಮಿಳುನಾಡಿನವರೊಬ್ಬರನ್ನು ಆ ಪದವಿಗೆ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next