Advertisement

ತಮಿಳುನಾಡು BJP ಮುಖಂಡನ ಹತ್ಯೆ

11:53 PM Apr 28, 2023 | Team Udayavani |

ಚೆನ್ನೈ: ತಮಿಳುನಾಡು ಬಿಜೆಪಿ ಎಸ್‌ಸಿ/ಎಸ್‌ಟಿ ಘಟಕದ ರಾಜ್ಯ ಖಜಾಂಚಿ ಮತ್ತು ವಲರಪುರಂ ಪಂಚಾಯತ್‌ ಅಧ್ಯಕ್ಷ ಪಿ.ಪಿ.ಜಿ.ಶಂಕರ್‌ ಅವರನ್ನು ಚೆನ್ನೈ ಹೊರವಲಯದ ನಜರತ್‌ಪೇಟ್‌ನಲ್ಲಿ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದೆ. ಶಂಕರ್‌ ತಮ್ಮ ಕಾರಿನಲ್ಲಿ ಗುರುವಾರ ರಾತ್ರಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಕನಿಷ್ಠ 4 ಮಂದಿ ಅವರ ಕಾರಿನ ಮೇಲೆ ಕಚ್ಚಾ ಬಾಂಬ್‌ ಎಸೆದಿದ್ದಾರೆ. ಕೂಡಲೇ ಶಂಕರ್‌ ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ. ಬೆನ್ನತ್ತಿದ್ದ ರೌಡಿಗಳು ಸಾರ್ವಜನಿಕರ ಎದುರೇ ಮಚ್ಚು, ಲಾಂಗ್‌ಗಳಿಂದ ಅವರನ್ನು ಹತ್ಯೆ ಮಾಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಲರಪುರಂನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next