Advertisement

Tamil Nadu; ಧಾರ್ಮಿಕ ದತ್ತಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಅಣ್ಣಾಮಲೈ ಧರಣಿ

08:48 PM Sep 11, 2023 | Team Udayavani |

ಚೆನ್ನೈ: ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಸಚಿವ ಪಿ.ಕೆ.ಶೇಖರ್ ಬಾಬು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸೋಮವಾರ ಧರಣಿ ನಡೆಸಿದರು.

Advertisement

ಇತ್ತೀಚೆಗೆ ಇಲ್ಲಿ ನಡೆದ ಸನಾತನ ಧರ್ಮ ವಿರೋಧಿ ಸಮಾವೇಶದಲ್ಲಿ ಬಾಬು ಭಾಗವಹಿಸಿದ್ದನ್ನು ವಿರೋಧಿಸಿ ಅಣ್ಣಾಮಲೈ ಅವರ ನೇತೃತ್ವದಲ್ಲಿ ನುಂಗಂಬಾಕ್ಕಂನಲ್ಲಿ ನಡೆದ ಪ್ರತಿಭಟನೆ ನಡೆಸಲಾಯಿತು. ಡಿಎಂಕೆ ನಾಯಕ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಸಮಾವೇಶದಲ್ಲಿ ಹೇಳಿಕೆ ನೀಡಿದ್ದು, ಇದು ರಾಷ್ಟ್ರವ್ಯಾಪಿ ಭಾರಿ ಗದ್ದಲಕ್ಕೆ ಕಾರಣವಾಗಿದೆ.

ಅಣ್ಣಾಮಲೈ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರು, ಹಠಾತ್ತನೆ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು, ಹಲವಾರು ಬೆಂಬಲಿಗರು ಭಾಗಿಯಾಗಿದ್ದರು.

“ಶೇಖರ್ ಬಾಬು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಎಂಕೆ ಕಾರ್ಯಕರ್ತನಾಗಿ ಏನು ಬೇಕಾದರೂ ಮಾಡಲಿ. ಡಿಎಂಕೆ ನಾಯಕ ವೀರಮಣಿ ಅವರು ಅದೇ ಸಭೆಯಲ್ಲಿ ಸನಾತನ ಸಂಸ್ಥೆ ಹಿಂದೂ ಧರ್ಮಕ್ಕೆ ಸಮಾನ ಎಂದರು. ರಾಜ್ಯದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಿಂದೂಗಳ ಕಲ್ಯಾಣಕ್ಕೆ ವಿರುದ್ಧವಾಗಿದೆ” ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next