Advertisement

ಕಾವೇರಿಗಾಗಿ ತಮಿಳು ಚಿತ್ರರಂಗ ಪ್ರತಿಭಟನೆ; ರಜನಿ,ಕಮಲ್‌ ಭಾಗಿ 

04:00 PM Apr 08, 2018 | Team Udayavani |

ಚೆನ್ನೈ : ಕಾವೇರಿ  ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ  ತಮಿಳು ನಾಡು ಚಿತ್ರರಂಗ ಭಾನುವಾರ ವಾಲುವಾರ ಕೊಟ್ಟಮ್‌ನಲ್ಲಿ ಒಂದು ದಿನದ ಪ್ರತಿಭಟನೆ ನಡೆಸುತ್ತಿದ್ದು ದಿಗ್ಗಜ ನಟರಾದ ರಜನಿಕಾಂತ್‌ ಮತ್ತು ಕಮಲಹಾಸನ್‌ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

Advertisement

ರಜನಿಕಾಂತ್‌ ಅವರು ಮಾತನಾಡಿ ‘ತಮಿಳುನಾಡು ಒಕ್ಕೊರಲ ಧ್ವನಿಯಿಂದ ಕೇಳುತ್ತಿದೆ. ಪ್ರಧಾನ ಮಂತ್ರಿಗಳು ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದರು. 

ಐಪಿಎಲ್‌:ಚೆನ್ನೈ ಕಪ್ಪುಪಟ್ಟಿ ಧರಿಸಲಿ!

‘ಜನರೆಲ್ಲಾ ಇಲ್ಲಿ ದಾಹದಿಂದಿರುವಾಗ ಐಪಿಎಲ್‌ ಆಟ ಆಡಬೇಕೆ. ನನ್ನ ಮನವಿ  ಎಂದರೆ ಚೆನ್ನೈ ಸೂಪರ್‌ ಕಿಂಗ್ಸ್‌ ಆಟಗಾರರು ಕನಿಷ್ಠ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿಯಬೇಕು’ ಎಂದರು.

ನಾನು ನೇರ ಹೋರಾಟ ಮಾಡುತ್ತಿದ್ದೇನೆ!

Advertisement

ನೀವು ಹೋರಾಟದಲ್ಲಿ ಭಾಗಿಯಾಗಿರುವ ಕಾರಣ ಕರ್ನಾಟಕದಲ್ಲಿ ನಿಮ್ಮ ಸಿನಿಮಾಗಳ ಕಲೆಕ್ಷನ್‌ ಮೇಲೆ ಪರಿಣಾಮ ಬೀರಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್‌ ‘ನಾನು ಸರಿಯಾದ ಕಾರಣಕ್ಕಾಗಿ ಚಳವಳಿ ಮಾಡುತ್ತಿದ್ದೇನೆ’ ಎಂದರು.

ಪ್ರತಿಭಟನೆಯಲ್ಲಿ ವಿಕ್ರಂ,ವಿಜಯ್‌, ವಿಶಾಲ್‌,ಸೂರ್ಯ ಸೇರಿದಂತೆ ನೂರಾರು ನಟ, ನಟಿಯರು  ಭಾಗಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next