Advertisement

ಬಿಳಿನೋಣ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ

03:05 PM Feb 21, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ತೆಂಗು ಬೆಳೆಗೆರೂಗೋಸ್‌ ಬಿಳಿನೋಣ ರೋಗ ಹರಡಿ ಕೊಂಡಿದೆ. ಈ ಬಗ್ಗೆ ಏನು ಕ್ರಮ ವಹಿಸಿದ್ದೀರಿ. ಕೂಡಲೇ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಶಾಸಕ ಎಂ.ಶ್ರೀನಿವಾಸ್‌ ಸೂಚಿಸಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಪಂ ಅಧ್ಯಕ್ಷೆ ಎಚ್‌.ಎಸ್‌.ಶಿವ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರೋಗ ಹರಡುತ್ತಿರುವುದರಿಂದ ರೈತರಿಗೆ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಪ್ರಚಾರ ಮಾಡಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲು ಕರಪತ್ರ ಮುದ್ರಿಸಿ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.

ರೈತರಿಗೆ ಸಲಹೆ: ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾ ಯಕ ನಿರ್ದೇಶಕಿ ಪುಷ್ಪಲತಾ, ರೋಗ ಹರಡಿರುವ ಮರಕ್ಕೆ ಬೇವಿನ ಎಣ್ಣೆ, ನೀರು ಮಿಶ್ರಣ ಮಾಡಿ ಸಿಂಪಡಿಸಿ ಎಂದು ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬಾಲಕಿಯರಿಗೂ ಸೌಲಭ್ಯ ಕಲ್ಪಿಸಿ: ಗ್ರಾಮೀ ಣ ಬಾಲಕರಿಗೆ ಮಾತ್ರ ಹಾಸ್ಟೆಲ್‌ ಇರುತ್ತದೆ. ಬಾಲಕಿಯರಿಗೂ ಈ ಸೌಲಭ್ಯಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗ್ರಾಮೀಣ ಬಾಲಕಿಯರಿಗೂ ಹಾಸ್ಟೆಲ್‌ ಸೌಲಭ್ಯ ಕೊಡಬೇಕಿದೆ. ಇದರಿಂದ ಎಷ್ಟೋವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ, ಹಿಂದು ಳಿದ ವರ್ಗಗಳ ಇಲಾಖೆ ಅಧಿಕಾರಿ ಗಳು ಗಮನಹರಿಸಬೇಕು ಎಂದರು.

ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಆದ್ಯತೆ ನೀಡಿ: ಇನ್ನು ಹಳ್ಳಿಗಳಲ್ಲಿ ಅಂಗಡಿನವಾಡಿ ಕೇಂದ್ರಕ್ಕೆ ಕಟ್ಟಡಗಳಿಲ್ಲದಿದ್ದರೆ ಸರ್ಕಾರದ ನಿಯಮದಂತೆ ಶಾಲೆ ಆವರಣದಲ್ಲಿಯೇ ಕಟ್ಟಿಕೊಳ್ಳಲು ಅವಕಾಶವಿದೆ. ಇದನ್ನು ಬಳಸಿಕೊಳ್ಳಬೇಕು ಎಂದು ಸಿಡಿಪಿ ಒಗೆ ಸೂಚಿಸಿದ ಶಾಸಕ, ಶಾಲಾ ಕಟ್ಟಡಕ್ಕೆ ಸಮಸ್ಯೆಯಿದ್ದರೆ ಸರಿಪಡಿಸಿಕೊಳ್ಳಿ. ಕೆಲ ಶಾಲಾ ಕಟ್ಟಡ ಅರ್ಧಕ್ಕೆ ನಿಂತಿದೆ. ಈ ಸಂಬಂಧ ಇಂಜಿನಿಯರ್‌ಗಳ ಸಭೆ ಕರೆಯಿರಿ ಎಂದು ಬಿಇಒಗಳಿಗೆ ತಿಳಿಸಿದರು.

Advertisement

ಯೋಜನೆಗೆ ಒಳಪಡಿಸಿ: ತಾಪಂ ಸದಸ್ಯ ಶಂಕರ್‌ಬಾಬು ಮಾತನಾಡಿ, ತಾಲೂಕಿನಲ್ಲಿ ಕುಡಿ ಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಇದಕ್ಕೆ ಶಾಸಕ ಎಂ.ಶ್ರೀನಿವಾಸ್‌, ಜಲಧಾರೆ ಯೋಜನೆಯ 2ನೇ ಹಂತದಲ್ಲಿ ಅಥವಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಡ್ಯ ತಾಲೂಕನ್ನು ಒಳಪಡಿಸಬೇಕು. ಆದ್ದರಿಂದ ಎಲ್ಲೆಲ್ಲಿ ವಾಟರ್‌ಟ್ಯಾಂಕ್‌ನ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಿದರು.

ನರ್ಸರಿ ನೌಕರರಿಗೆ ವೇತನ ನೀಡಿ: ಸದಸ್ಯ ಮಂಜೇಗೌಡ ಮಾತನಾಡಿ, ಬಸರಾಳಿನಲ್ಲಿ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹಲವು ತಿಂಗಳಿನಿಂದ ಏಕೆ ವೇತನ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಅಧಿಕಾರಿ ಬೀರಪ್ಪ ಪ್ರತಿಕ್ರಿಯಿಸಿ,ಅನುದಾನದ ಸಮಸ್ಯೆ ಇತ್ತು. ಬಿಡು ಗಡೆಯಾದ ಕೂಡಲೇ ಕೊಡುವುದಾಗಿ ತಿಳಿಸಿದರು. ಎಂ.ಶ್ರೀನಿವಾಸ್‌ ಮಾತನಾಡಿ, ಅರಣ್ಯ ಇಲಾಖೆಯವರು ರೈತರಿಗೆ ಮಹಾಘನಿ ಸಸಿಗಳನ್ನು ನೀಡಬೇಕು

ಎಂದು ಸೂಚನೆ ನೀಡಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಶ್ವೇತಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಬಸವ ರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next