Advertisement

ಬಲಿದಾನ್ ದಿವಸ್: ಎಬಿವಿಪಿಯಿಂದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

08:06 PM Mar 31, 2022 | Team Udayavani |

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ವತಿಯಿಂದ ಬಲಿದಾನ್ ಟ್ರೋಫಿ 2022 ತಾಲೂಕು ಮಟ್ಟದ ಅಂತರ್ ಕಾಲೇಜು ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಲಾಲ್ ಬಾಗಿನ ಆಫೀಸರ್ ಕ್ಲಬ್ ನಲ್ಲಿ ಆಯೋಜಿಸಲಾಯಿತು.

Advertisement

ಪಂದ್ಯಾಟವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕಿಶೋರ್ ಕುಮಾರ್ ಅವರು ಉದ್ಘಾಟಿಸಿ ಶುಭಹಾರೈಸಿದರು. ಮಂಗಳೂರು ತಾಲೂಕಿನಿಂದ ಒಟ್ಟು 25 ತಂಡಗಳು ಭಾಗವಹಿಸಿದ್ದವು.
ಪ್ರಥಮ ಸ್ಥಾನವನ್ನು ವಿಕಾಸ್ ಕಾಲೇಜ್ ಪಡೆದರೆ, ದ್ವಿತೀಯ ಸ್ಥಾನವನ್ನು ಎಸ್ ಡಿ ಎಂ ಪದವಿ ಕಾಲೇಜು ಪಡೆಯಿತು, ಮೂರನೇ ಸ್ಥಾನವನ್ನು ಪ್ರಯೋಜನ ಕಾಲೇಜ್ ಪಡೆಯಿತು, ನಾಲ್ಕನೇ ಸ್ಥಾನವನ್ನು ಮಂಗಳೂರು ಯುನಿವರ್ಸಿಟಿ ಕಾಲೇಜ್ ಕೊಣಾಜೆ ಪಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಶ್ರೀಲಕ್ಷ್ಮಿ ಮಠದಮೂಲೆ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪ್ರಣಮ್ ಶೆಟ್ಟಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ಮಂಗಳೂರು ತಾಲೂಕು ಸಂಚಾಲಕ ಶ್ರೇಯಸ್ ಶೆಟ್ಟಿ, ಮಂಗಳೂರು ಮಹಾನಗರ ಅಧ್ಯಕ್ಷರಾದ ಭಾರತಿ ಪ್ರಭು, ಮಂಗಳೂರು ಮಹಾನಗರ ಕಾರ್ಯದರ್ಶಿಯಾದ ಆದಿತ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next