Advertisement

Taluk Centre: ಮಹಾಲಿಂಗಪುರ ಪಟ್ಟಣ ತಾಲೂಕು ಕೇಂದ್ರವಾಗಿ ಘೋಷಿಸಿ

08:19 PM Jul 30, 2024 | Team Udayavani |

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ) : ಮಹಾಲಿಂಗಪುರ ಪಟ್ಟಣ ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ ಮನವಿ ಸಲ್ಲಿಸಿದರು. ‌‌‌‌

Advertisement

ಪ್ರವಾಹ ವೀಕ್ಷಣೆಗಾಗಿ ಮುಧೋಳ ತಾಲೂಕಿಗೆ ಆಗಮಿಸಿದ ಸಚಿವ ಕೃಷ್ಣಬೈರೇಗೌಡ ಹಿಪ್ಪರಗಿ ಜಲಾಶಯಕ್ಕೆ ತೆರಳುವ ವೇಳೆ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮನವಿ ಸಲ್ಲಿಸಿದ ಸಂಗಪ್ಪ ಮಹಾಲಿಂಗಪುರ ಹೋರಾಟಗಾರರು ಕಳೆದ 839 ದಿನಗಳಿಂದ ತಾಲೂಕಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಮನವಿ ಸ್ವೀಕರಿಸಿದ ಸಚಿವರು ಪ್ರತಿಕ್ರಿಯಿಸಿ ನಾನು ಈಗ ಪ್ರವಾಹ ವೀಕ್ಷಣೆಗಾಗಿ ಆಗಮಿಸಿದ್ದು, ತಮ್ಮ ಮನವಿಯ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ . ಸರ್ಕಾರದಿಂದ ಹೊಸ ತಾಲೂಕಿನ ಪ್ರಸ್ತಾವನೆಗಳು ಬಂದಾಗ ಮಹಾಲಿಂಗಪುರ ಪಟ್ಟಣ ಪರಿಗಣಿಸುತ್ತೇವೆ ಎಂದರು. ಚನ್ನಮ್ಮ ವೃತ್ತದಿಂದ ಕೂಗಳತೆಯ ದೂರದಲ್ಲಿರುವ ನಮ್ಮ ವೇದಿಕೆಗೆ ಬಂದು ಸಚಿವರು ಮನವಿ ಸ್ವೀಕರಿಸಲಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಹೋರಾಟ ವೇದಿಕೆಯ ಮಹಾಲಿಂಗಪ್ಪ ಅವರಾದಿ, ಸಿದ್ದು ಶಿರೋಳ, ರಫೀಕ ಮಾಲದಾರ, ಅರ್ಜನ ಹಲಗಿಗೌಡರ, ಸಿ.ಎಂ.ಹುರಕಡ್ಲಿ, ಮಹ್ಮದ ಹೂಲಿಕಟ್ಟಿ, ಈಶ್ವರ ಮುರಗೋಡ, ದುಂಡಪ್ಪ ಇಟ್ನಾಳ, ಸಿದ್ದು ಬೆನ್ನೂರ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next