Advertisement

ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸೇವಾ ಸಂಘ ಅಸ್ತಿತ್ವಕ್ಕೆ

07:06 PM Nov 28, 2021 | Team Udayavani |

ಕೊಟ್ಟಿಗೆಹಾರ: ತಾಲ್ಲೂಕು ನಾರಾಯಣಗುರು ಮಲಯಾಳಿ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ ಮೂಡಿಗೆರೆಯಲ್ಲಿ ಭಾನುವಾರ ನಡೆಯಿತು.

Advertisement

ಮೂಡಿಗೆರೆಯ ದೀನ್ ದಯಾಳ್ ಉಪಾಧ್ಯಾಯ್ ಸಭಾಂಗಣದಲ್ಲಿ ನಡೆದ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ನೂತನ ಅಧ್ಯಕ್ಷರಾದ ಮಹೇಶ್ ಗೋಣಿಬೀಡು, ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಸಂಘಟಿತವಾಗಿ ಕಾರ್ಯ ಪ್ರವೃತ್ತರಾಗಲು ಸಂಘದ ಅವಶ್ಯಕವಾಗಿದ್ದು ಸಂಘದ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಬೇಕಿದೆ ಎಂದರು.

ತಾಲ್ಲೂಕು ನಾರಾಯಣಗುರು ಮಲಯಾಳಿ ಸೇವಾ ಸಂಘದ ಅಧ್ಯಕ್ಷರಾಗಿ  ಮಹೇಶ್ ಗೋಣಿಬೀಡು, ಉಪಾಧ್ಯಕ್ಷರಾಗಿ ಕುಮಾರ್ ಬಿಳ್ಳೂರು, ಕಾರ್ಯದರ್ಶಿ ಪ್ರವೀಣ್ ಕೆ.ಆರ್ ಕೃಷ್ಣಾಪುರ, ಸಹ ಕಾರ್ಯದರ್ಶಿಯಾಗಿ ರಾಜೇಶ್ ಬಿಳುಗುಳ, ಖಜಾಂಚಿಯಾಗಿ ಸುಧಾಕರ್, ಸಂಘಟನಾ ಕಾರ್ಯದರ್ಶಿಗಳಾಗಿ  ಜಗನ್‌ಮೋಹನ್, ಸುಲೋಚನಾ, ಮನು, ಸಾತ್ವಿಕ್, ಪ್ರಮೀಳ, ಮಲ್ಲಿಕಾರ್ಜುನ್, ಉದಯ್, ಶಾಂತಿ, ಅವಿನಾಶ್, ಪ್ರಭಾಕರ್, ಅಭಿಲಾಷ್, ರಾಜಣ್ಣ, ಮಂಜುನಾಥ್, ಹರೀಶ್, ನಳರಾಜ್, ಆಯ್ಕೆಯಾದರು.

ಈ ಸಂದರ್ಭದಲ್ಲಿ ತಾಲ್ಲೂಕು ನಾರಾಯಣಗುರು ಮಲಯಾಳಿ ಸೇವಾ ಸಂಘದ ಪಧಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next