Advertisement

ತಲ್ಲೂರು ಜಂಕ್ಷನ್‌: ಬೀದಿ ದೀಪ ಅಳವಡಿಕೆಗೆ ಆಗ್ರಹ

12:04 AM Jun 29, 2020 | Sriram |

ಕುಂದಾಪುರ: ಕೊಲ್ಲೂರು, ಬೈಂದೂರು, ಕುಂದಾಪುರ ಮತ್ತಿತರೆಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶ ತಲ್ಲೂರು ಜಂಕ್ಷನ್‌ ಆಗಿದೆ. ಆದರೆ ಬೇರೆ ಕಡೆಗಳಲ್ಲಿ ಬೀದಿದೀಪದ ವ್ಯವಸ್ಥೆ ಮಾಡಿದ್ದರೂ ಈ ಜಂಕ್ಷನ್‌ನಲ್ಲಿ ಇದುವರೆಗೂ ಅಳವಡಿಸಿಲ್ಲ.

Advertisement

ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದು ರಾತ್ರಿ ವೇಳೆ ವಾಹನ ಸವಾರರು, ಪಾದಚಾರಿಗಳು ರಸ್ತೆ ದಾಟುವ ವೇಳೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಕುಂದಾಪುರದ ಸಂಗಮ್‌, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ ಮತ್ತಿತರ ಕಡೆಗಳಲ್ಲೆಲ್ಲ ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಐಆರ್‌ಬಿ ಸಂಸ್ಥೆಯವರು ಬೀದಿ ದೀಪ ಅಳವಡಿಸಿದ್ದಾರೆ. ಆದರೆ ಮಧ್ಯದಲ್ಲಿ ಬರುವ ಈ ಜಂಕ್ಷನ್‌ನಲ್ಲಿ ಮಾತ್ರ ಯಾಕೆ ಇನ್ನೂ ಬೆಳಕಿನ ವ್ಯವಸ್ಥೆ ಮಾಡಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ.

ಬೀದಿದೀಪ ಶೀಘ್ರ ಅಳವಡಿಕೆಗೆ ಸೂಚನೆ
ಈ ಹಿಂದೊಮ್ಮೆ ತಲ್ಲೂರು ಸಹಿತ ಕುಂದಾಪುರದಿಂದ ಬೈಂದೂರುವರೆಗಿನ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಬೀದಿ ದೀಪಗಳ ಆವಶ್ಯಕತೆಯಿದೆಯೋ ಅಲ್ಲಿ ಅಳವಡಿಕೆಗೆ ಐಆರ್‌ಬಿಯವರಿಗೆ ಸೂಚನೆ ನೀಡಿದ್ದೆ. ಈಗ ಬಹುತೇಕ ಕಡೆಗಳಲ್ಲಿ ಅಳವಡಿಸಲಾಗಿದೆ ಎಂದವರು ತಿಳಿಸಿದ್ದಾರೆ. ತಲ್ಲೂರು ಜಂಕ್ಷನ್‌ನಲ್ಲಿಯೂ ಅಳವಡಿಕೆಗೆ ಶೀಘ್ರ ಸೂಚನೆ ನೀಡಲಾಗುವುದು.
– ಕೆ. ರಾಜು, ಸಹಾಯಕ ಆಯುಕ್ತರು, ಕುಂದಾಪುರ ಉಪ ವಿಭಾಗ

 

Advertisement

Udayavani is now on Telegram. Click here to join our channel and stay updated with the latest news.

Next