Advertisement

ಜೆಡಿಎಸ್‌-ಬಿಜೆಪಿ ನಡುವೆ ವಾಗ್ಯುದ್ಧ

01:11 PM Jun 19, 2019 | Suhan S |

ತುಮಕೂರು: ಮಾಜಿ ಶಾಸಕ ಬಿ.ಸುರೇಶ್‌ಗೌಡರಿಗೆ ಜೆಡಿಎಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವೇಳೆ ಯಲ್ಲಿ ಜೆಡಿಎಸ್‌ ಬಿಜೆಪಿ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ತಳ್ಳಾಟ ನೂಕಾಟದಲ್ಲಿ ಹೋಟೆಲ್ನ ಪೀಠೊ ಪಕರಣಗಳಿಗೆ ಹಾನಿಯಾಗಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

Advertisement

ನಗರದ ಬಿ.ಎಚ್.ರಸ್ತೆಯ ಹೊಯ್ಸಳ ಹೋಟೆಲ್ನಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಸುರೇಶ್‌ಗೌಡ ಬರುವುದಕ್ಕೂ ಮುಂಚೆಯೇ ಹೋಟಲ್ಗೆ ಆಗಮಿಸಿದ್ದ ಗ್ರಾಮಾಂತರ ಜೆಡಿಎಸ್‌ ಅಧ್ಯಕ್ಷ ಹಾಲನೂರು ಅನಂತಕುಮಾರ್‌, ಯುವ ಘಟಕದ ಅಧ್ಯಕ್ಷರಾದ ಹಿರೇಹಳ್ಳಿ ಮಹೇಶ್‌, ಬೆಳಗುಂಬ ವೆಂಕಟೇಶ್‌ ಮತ್ತಿತರರು ಪತ್ರಿಕಾಗೋಷ್ಠಿ ಆಗುವವರೆಗೆ ಹೋಟೆಲನಲ್ಲಿಯೇ ಇದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸುರೇಶ್‌ಗೌಡ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್‌ ವಿರುದ್ಧ ಆರೋಪ ಮಾಡಿದ್ದರು.

ಸುರೇಶ್‌ಗೌಡರ ಪ್ರಶ್ನೆ:‘ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 6 ತಿಂಗಳಿನಿಂದ ಕಳ್ಳತನ ನಡೆದಿದ್ದು, ಎಲ್ಲದರಲ್ಲೂ ವಂತಿಕೆ ರೂಪದಲ್ಲಿ ಪ್ರತಿ ಕ್ರೈಂನಲ್ಲಿಯೂ, ಪ್ರತಿ ಕೇಸಿನಲ್ಲಿಯೂ ಶಾಸಕರು ಹಣ ಪಡೆಯುತ್ತಿದ್ದಾರೆ. ಹಸು ಕಳ್ಳತನದಲ್ಲಿ ಇಷ್ಟು, ಒಡವೆ ಕಳ್ಳತನದಲ್ಲಿ ಇಷ್ಟು, ಗಾಡಿ ಹಿಡಿದ ಕೇಸಿಗೆ ಇಷ್ಟು, ಟ್ರ್ಯಾಕ್ಟರ್‌ ಹಿಡಿದರೆ ಇಷ್ಟು, ಮರಳು ಲಾರಿ ಹಿಡಿದರೆ ಇಷ್ಟು, ಗಣಿ ಕಲ್ಲು ತುಂಬಿದ ಲಾರಿ ಹಿಡಿದರೆ ಇಷ್ಟು, ಕೆಐಎಡಿಬಿ ಜಮೀನಿಗೆ ಇಷ್ಟು, ಜಮೀನು ವಿವಾದಕ್ಕೆ ಇಷ್ಟು, ಅಪಘಾತಕ್ಕೆ ಇಷ್ಟು ಎಂಬಂತೆ ಶಾಸಕರ ಕೆಲವು ಬೆಂಬಲಿಗರ ಮೂಲಕ ಶಾಸಕರು ವಸೂಲಿಗೆ ಇಳಿದಿರುವುದು ಪ್ರಜಾ ಪ್ರಭುತ್ವವನ್ನು ಅಣಕಿಸು ವಂತಿದೆ. ಮತ ನೀಡುವ ಜನತೆಗೆ ನೀಡುವ ನ್ಯಾಯ ಇದೇನಾ ಸ್ವಾಮಿ’ ಎಂದು ಪ್ರಶ್ನಿಸಿದ್ದರು.

ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದಂತೆ ಜೆಡಿಎಸ್‌ ಮುಖಂಡ ಹಾಲನೂರು ಅನಂತ ಕುಮಾರ್‌ ಮಾಜಿ ಶಾಸಕರನ್ನು ತಮ್ಮ ಬೆಂಬಲಿಗ ರೊಂದಿಗೆ ಅಡ್ಡ ಹಾಕಿ ಪತ್ರಿಕಾಹೇಳಿಕೆಯನ್ನು ಹಿಡಿದು ಕೊಂಡು ನೀವು ಈ ರೀತಿ ಯಾವ ಆಧಾರದಿಂದ ಹೇಳುತ್ತೀರಾ ಎಂದು ಆಕ್ರೋಶದಲ್ಲಿ ಪ್ರಶ್ನಿಸಿದರು.

Advertisement

ಮಾಜಿ ಶಾಸಕರಿಗೆ ಮುತ್ತಿಗೆ ಹಾಕುತ್ತಲೆ ಬಿಜೆಪಿ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು, ಸುರೇಶ ಗೌಡರಿಗೆ ಸುತ್ತುವರಿದು ನಿಂತರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ನೂಕಾ- ತಳ್ಳಾಟ ನಡೆಯಿತು. ಒಂದು ಹಂತಕ್ಕೆ ಕೈ ಕೈ ಮಿಲಾಯಿ ಸುವವರೆಗೂ ಹೋಗಿತ್ತು. ಆದರೆ ಮಾಜಿ ಶಾಸಕರು ತಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಹೊರನಡೆದರು.

ಹೋಟೆಲ್ನಲ್ಲಿದ್ದವರಿಗೆ ಗಾಬರಿ ಮೂಡಿಸಿತು. ಈ ನೂಕಾಟ ತಳ್ಳಾಟದಲ್ಲಿ ಹೋಟೆಲ್ನ ಪೀಠೊಪ ಕರಣಗಳು ಹಾಳಾದವು. ಘಟನೆ ನಡೆದು ಅರ್ಧ ಗಂಟೆಗೆ ನಗರದ ಡಿವೈಎಸ್‌ಪಿ ಸೇರಿ ಹಲವು ಪೊಲೀಸರು ಹೋಟೆಲ್ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವ ದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್ಪಿ ಕಚೇರಿಗೆ ತೆರಳಿ ಗ್ರಾಮಾಂತರ ಕ್ಷೇತ್ರದಲ್ಲಿ ಕಳ್ಳತನ ಮಾಡುವ ಕಳ್ಳರನ್ನು ಹಿಡಿಯಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಹೊರಬರುವ ವೇಳೆ ಜೆಡಿಎಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದರು. ಏನೇ ಆರೋಪವಿದ್ದರೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಬಹುದಿತ್ತು. ಅದನ್ನು ಬಿಟ್ಟು 2 ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿರುವ ಮಾಜಿ ಶಾಸಕರ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next