Advertisement
ಹೆದ್ದಾರಿ ನಿರ್ಮಾಣ ಸಂಸ್ಥೆಯಾದ ನವಯುಗ್ ತಲಪಾಡಿಯಲ್ಲಿ ಬುಧವಾರ ಟೋಲ್ ವಸೂಲಿ ಪ್ರಾರಂಭಿಸಿತ್ತು. ಸ್ಥಳೀಯರಿಗೆ ಟೋಲ್ ವಿನಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಕಾರ ಬಂಧನದ ಬಳಿಕ ಟೋಲ್ ನಿರಾತಂಕವಾಗಿ ಮುಂದುವರಿದಿದೆ.
ಪತ್ರಿಕೆ ವಾಹನ, ಹಾಲಿನ ವಾಹನ, ಆ್ಯಂಬುಲೆನ್ಸ್ ಹಾಗೂ ಔಷಧ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ನಡೆಯಲಿದೆ. ಬಸ್ ದರ ಏರಿಕೆ: ಟೋಲ್ ಬಿಸಿಯ ನಡುವೆಯೇ ಬಸ್ ಪ್ರಯಾಣಿಕರಿಗೆ ಯಾನದರ ಏರಿಕೆಯ ಬಿಸಿ ತಟ್ಟಿದೆ. ಕೇರಳ ಮತ್ತು ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಟಿಕೇಟ್ ದರ ರೂ. 17ರಿಂದ 18, 18ರಿಂದ 21ಕ್ಕೆ ಏರಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
Related Articles
Advertisement