Advertisement

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

10:27 PM May 05, 2024 | Team Udayavani |

ಬೆಳ್ತಂಗಡಿ: ಸಂಪೂರ್ಣ ಆರಿದ್ದ ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.

Advertisement

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬರಮೇಲು ಲೋಕಯ್ಯ ಪೂಜಾರಿ ಅವರ ಮನೆ ಬಾವಿ ಬಳಿ ರವಿವಾರ ಮಧ್ಯಾಹ್ನದ ಹೊತ್ತು ಸುತ್ತಾಡುತ್ತಿದ್ದ ನಾಗರಹಾವು ಬಾವಿಗೆ ಬಿದ್ದಿತು. ಇದನ್ನು ಗಮನಿಸಿದ ಮನೆಯವರು ಉರಗಮಿತ್ರ ಕಕ್ಕಿಂಜೆಯ ಸ್ನೇಕ್‌ ಅನಿಲ್‌ ಅವರಿಗೆ ಮಾಹಿತಿ ನೀಡಿದರು. ತತ್‌ಕ್ಷಣ ಆಗಮಿಸಿದ ಅವರು, ಬಾವಿಗೆ ಇಳಿದು ನಾಗರಹವನ್ನು ರಕ್ಷಿಸಿ ಮೇಲೆತ್ತಿದರು.

ಒಂದೇ ದಿನ ಚಾರ್ಮಾಡಿ ಹಾಗೂ ನೆರಿಯದ ಬಸ್ತಿಯಲ್ಲೂ ನಾಗರಹಾವುಗಳು ಕಂಡುಬಂದಿದ್ದು, ಒಟ್ಟು ಮೂರು ನಾಗರಹಾವುಗಳನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next