Advertisement

Shakti ಹೇಳಿಕೆ; ರಾಹುಲ್ ವಿರುದ್ಧ ಕಠಿಣ ಕ್ರಮಕ್ಕೆ ಚುನಾವಣ ಆಯೋಗಕ್ಕೆ ಬಿಜೆಪಿ ಒತ್ತಾಯ

08:54 PM Mar 20, 2024 | Team Udayavani |

ಹೊಸದಿಲ್ಲಿ: ಮುಂಬೈನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾರೋಪ ಸಮಾರಂಭದಲ್ಲಿ “ಶಕ್ತಿಯ ವಿರುದ್ಧ ಹೋರಾಟ” ಎಂದು ನೀಡಿದ ಹೇಳಿಕೆ ಕುರಿತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಬುಧವಾರ ಚುನಾವಣ ಆಯೋಗಕ್ಕೆ ದೂರು ಸಲ್ಲಿಸಿದೆ.

Advertisement

ಕಾಂಗ್ರೆಸ್ ನಾಯಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಚುನಾವಣ ಸಮಿತಿಯನ್ನು ಬಿಜೆಪಿ ಒತ್ತಾಯಿಸಿದ್ದು ಮತ್ತು ಅವರ ವಿರುದ್ಧ ಎಫ್‌ಐಆರ್ ಅರ್ಜಿ ಸಲ್ಲಿಸಲು ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಿದೆ.

ಚುನಾವಣ ಸಮಿತಿಗೆ ನೀಡಿದ ಜ್ಞಾಪನಾ ಪತ್ರದಲ್ಲಿ, ಬಿಜೆಪಿ ನಾಯಕರಾದ ಹರ್ದೀಪ್ ಸಿಂಗ್ ಪುರಿ ಮತ್ತು ಓಂ ಪಾಠಕ್, ‘ರಾಹುಲ್ ಗಾಂಧಿಯವರ ಶಕ್ತಿಯ ವಿರುದ್ಧ ಹೋರಾಟ ಹೇಳಿಕೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದುರುದ್ದೇಶ ಹೊಂದಿವೆ. ಅಪಾರ ಜನರ ಶಕ್ತಿಗೆ ಸಂಬಂಧಿಸಿದ ಧಾರ್ಮಿಕ ಮೌಲ್ಯಗಳನ್ನು ಅವಮಾನಿಸುವ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುವ ದುರುದ್ದೇಶದಿಂದ ಕೊಡಿವೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next