Advertisement

ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ

04:57 PM Dec 28, 2020 | Suhan S |

ಬಳ್ಳಾರಿ: ಕೋವಿಡ್‌ ಮಹಾಮಾರಿಯಿಂದಾಗಿ ಕಳೆದ ಮಾರ್ಚ್‌ನಿಂದ ಶಾಲಾ ಮಕ್ಕಳುಓದು ಬರಹದಿಂದ ದೂರವಿದ್ದು,ಅವರನ್ನು ಮತ್ತೇ ಶಾಲೆಯತ್ತಅತ್ಯಂತ ಸಂಭ್ರಮದಿಂದಬರಮಾಡಿಕೊಳ್ಳಲು ಶಿಕ್ಷಣ ಇಲಾಖೆಉದ್ದೇಶಿಸಿದೆ. ಜ.1ರಂದು ಅತ್ಯಂತ ಸಂಭ್ರಮಮತ್ತು ವೈಭವೋಪೇತವಾಗಿ ಶಾಲೆಗಳನ್ನುಪುನರಾರಂಭಿಸಲು ತೀರ್ಮಾನಿಸಲಾಗಿದೆ.

Advertisement

ಶಿಕ್ಷಣ ಸಚಿವ ಸುರೇಶಕುಮಾರ್‌ ಅಧ್ಯಕ್ಷತೆ,ಶಿಕ್ಷಣ ಇಲಾಖೆ ಆಯುಕ್ತರ ಉಪಸ್ಥಿತಿಯಲ್ಲಿಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ನಡೆದ ವಿಡಿಯೋ ಕಾನ್ಫರೆನ್ಸ್‌ನಂತರ ಜಿಪಂ ಸಿಇಒ ಕೆ.ಆರ್‌. ನಂದಿನಿಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರು ಹಾಗೂ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ಶಾಲಾ ಪ್ರಾರಂಭೋತ್ಸವ ಮತ್ತು ಅದಕ್ಕೂ ಮುನ್ನ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳನ್ನು ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಿದ್ದಾರೆ. 2021ರ ಜ. 1ರಿಂದ ಶಾಲಾ ಪ್ರಾರಂಭೋತ್ಸವ ಅನುಷ್ಠಾನಗೊಳಿಸಲು ಈಗಾಗಲೇ ಡಿಎಸ್‌ಇಆರ್‌ಟಿಯಿಂದ ಬಿಡುಗಡೆಗೊಂಡಿರುವ ಶಾಲಾ ಪ್ರಾರಂಭೋತ್ಸವ ಮಾರ್ಗಸೂಚಿಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಪರಿಷ್ಕೃತ ಸುತ್ತೋಲೆ ಅನುಸರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

10ನೇ ತರಗತಿಯವರಿಗೆ ಪೂರ್ಣಶಾಲೆಗಳು 2021 ಜ. 1ರಿಂದ ಪ್ರಾರಂಭವಾಗಲಿವೆ. ಎಲ್ಲ ತರಗತಿ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಸ್ವಇಚ್ಛೆಯಿಂದ ಪೋಷಕರ ಒಪ್ಪಿಗೆ ಪತ್ರದ ಮೇರೆಗೆ ಶಾಲೆಗೆ ಹಾಜರಾಗಬಹುದು. ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೂ ತರಗತಿ ಆಲಿಸಬಹುದಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ವಿದ್ಯಾಗಮ ಜ. 1ರಿಂದ ಪ್ರಾರಂಭ: 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿವಿದ್ಯಾಗಮ ಜ.1ರಿಂದ ಪ್ರಾರಂಭವಾಗಲಿವೆ. 1 ರಿಂದ 5ನೇ ತರಗತಿಗೆ ವಿದ್ಯಾಗಮಜ.14ರಿಂದ ಪ್ರಾರಂಭವಾಗಲಿವೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Advertisement

ಶಾಲೆಗೆ ಹಾಜರಾಗುವ ಎಲ್ಲ ಮಕ್ಕಳನ್ನು ಪ್ರತಿದಿನ ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನ್‌ ಮೂಲಕ ಪರೀಕ್ಷಿಸುವುದು. ರೋಗ ಲಕ್ಷಣ ಕಂಡು ಬಂದರೆ ಶಾಲೆಗೆ ಹಾಜರಾಗುವಂತಿಲ್ಲ. ಒಂದು ವೇಳೆ ಯಾವುದೇ ರೀತಿಯರೋಗಲಕ್ಷಣಗಳು ಇದ್ದಲ್ಲಿ ಪೋಷಕರಗಮನಕ್ಕೂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.

ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳಾಗಿ ಶಾಲಾ ಕಟ್ಟಡದ ಗೋಡರೀಲಿಂಕ್ಸ್‌ ಲಿಫೈ, ಸೈರ್‌ಕೇಸ್‌, ವಾಹನಗಳು ಪೀಠೊಪಕರಣಗಳು ಇತ್ಯಾದಿಗಳನ್ನು 1%ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸುವುದು, ಸೇವಾ ಸಂಸ್ಥೆಗಳಾದ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಮತ್ತು ಸೌಟ್‌ ಮತ್ತು ಗೈಡ್‌ ಹಾಗೂ ದಾನಿಗಳ ನೆರವನ್ನು ಪಡೆದು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಲಭ್ಯತೆ ಒದಗಿಸುವುದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ಪ್ರಾರಂಭೋತ್ಸವಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಕೊಠಡಿಮೀಸಲಿಡಬೇಕು ಎಂದು ಸೂಚಿಸಿರುವಅವರು ಎಲ್ಲ ಶಾಲೆಗಳ ಶೌಚಾಲಯ, ಕೊಠಡಿಗಳು, ಮೈದಾನ, ಶಾಲಾ ಆವರಣವು ಸ್ವಚ್ಛ ಮಾಡಿಸುವುದು. ಶಾಲೆಗಳನ್ನುತಳೀರು ತೋರಣಗಳಿಂದ ಸಿಂಗರಿಸಿ ಶಾಲಾಅಂಗಳದಲ್ಲಿ ರಂಗೋಲಿ ಬಿಡಿಸಿ ಶಾಲಾಆವರಣ ಅಂದಗೊಳಿಸಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next