Advertisement

ಕ್ರೀಡಾಕೂಟದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ

01:35 PM Mar 14, 2021 | Team Udayavani |

ಚಿಕ್ಕಬಳ್ಳಾಪುರ: ಸದಾ ಒತ್ತಡದಲ್ಲಿ ಕಾರ್ಯ  ನಿರ್ವಹಿಸುವ ಸರ್ಕಾರಿ ಉದ್ಯೋಗಿಗಳು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದ್‌ ರೆಡ್ಡಿ (ಬಾಬು) ಹೇಳಿದರು.

Advertisement

ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಕವಿಪ್ರನಿ ನೌಕರರ ಸಂಘದ (659) ಆಶ್ರಯದಲ್ಲಿ ದಿ.ಕೆ. ಕಿಶೋರ್‌ ಕುಮಾರ್‌ ಅವರ ಸ್ಮರಣಾರ್ಥ ಚಿಕ್ಕಬಳ್ಳಾಪುರ ವಿಭಾಗ ಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನುಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸನಿರ್ವಹಿಸುವ ಸರ್ಕಾರಿ ನೌಕರರು ಹಾಗೂ ವಿದ್ಯುತ್‌ಸರಬರಾಜು ವಿಭಾಗಗಳಲ್ಲಿ ಕಾರ್ಯನಿರ್ವಹಿಸುವಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದರು.

ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷಕೆ.ವಿ.ನಾಗರಾಜ್‌, ತಾಪಂ ಮಾಜಿ ಅಧ್ಯಕ್ಷ ಚನ್ನಕೃಷ್ಣಪ್ಪ,ಕೆ.ವಿ.ಶಿಕ್ಷಣ ಸಂಸೆ §ಯ ಕೆ.ವಿ.ನವೀನ್‌ಕಿರಣ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣ ಮೂರ್ತಿ, ನಗರಸಭೆ ಸದಸ್ಯ ನಾಗರಾಜ್‌, ರುಕ್ಮುಣಿ ಮುನಿರಾಜು, ಕೆ.ವಿ.ರಾಜಶೇಖರ್‌, ಭೂ ಅಭಿವೃದ್ಧಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಕೆಪಿಟಿಸಿ ನೌಕರರ ಸಂಘದ(659) ಮಾಜಿ ಸಂಘಟನಾಕಾರ್ಯದರ್ಶಿ ಎಲ್‌.ನಾಗರಾಜ್‌, ಎಸ್‌.ಎನ್‌.ಅಶ್ವತ್ಥನಾರಾಯಣ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಶ್ರೀನಿವಾಸ್‌, ಅಧ್ಯಕ್ಷ ಎಸ್‌.ಗೋವರ್ಧನ್‌ ಸಾಗರ್‌, ಉಪಾಧ್ಯಕ್ಷ ರಿಯಾಝ್ಪಾಷ, ಕಾರ್ಯದರ್ಶಿ ಮೂರ್ತಿ ಹಾಗೂ ಸ್ಥಳೀಯ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

 ನಿಗದಿತ ಅವಧಿಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ :

ಗೌರಿಬಿದನೂರು: ಸರ್ಕಾರಿ ಪ.ಪೂ.ಕಾಲೇಜನ್ನುಮಾದನಹಳ್ಳಿ ಕೆರೆ ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗುವುದು ಎಂದು ಶಾಸಕ ಎನ್‌.ಎಚ್‌. ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರ ವ್ಯಾಪ್ತಿಯ ಮಾದನಹಳ್ಳಿ ಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪದವಿ ಪೂರ್ವ ಶಿಕ್ಷಣಇಲಾಖೆಯ ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನಬಾರ್ಡ್‌ ಯೋಜನೆಯಲ್ಲಿ ಕೋಟಿ ರೂ.ವೆಚ್ಚದಲ್ಲಿ ನಾಲ್ಕು ದೊಡ್ಡ ಕೊಠಡಿಗಳು ಹಾಗೂ 8 ಶೌಚಾಲಯ, 5 ಲಕ್ಷ ವೆಚ್ಚದ ಕೊಳವೆಬಾವಿಯೂಒಳಗೊಂಡಿದ್ದು, ಮುಂಬರುವ ಶೈಕ್ಷಣಿಕ ವರ್ಷಮೇ-ಜೂನ್‌ನಲ್ಲಿ ತರಗತಿಗಳು ಹೊಸ ಕೊಠಡಿಯಲ್ಲಿ ಪ್ರಾರಂಭವಾಗಲು ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಿ ಎಂದು ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಗಾಯತ್ರಿ ಬಸವರಾಜ್‌, ಕಾಂಗ್ರೆಸ್‌ ಮುಖಂಡರಾದ ವೆಂಕಟರಮಣ, ಅಶ್ವತ್ಥಪ್ಪ ಸೇರಿದಂತೆಹಲವಾರು ಮುಖಂಡರು, ನಿವೃತ್ತ ಡಿಡಿಪಿಐ ಅಶ್ವತ್ಥರೆಡ್ಡಿ, ಜಿಪಂ ಅಭಿಯಂತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next