ಗುಂಡ್ಲುಪೇಟೆ: ಪ್ರಧಾನ ಮಂತ್ರಿಗಳ ಸೇವಾನಿಧಿ ಯೋಜನೆಯಡಿಯಲ್ಲಿ ನೀಡುತ್ತಿರುವ ಸಾಲ ಮೇಳದ ಯೋಜನೆ ಯನ್ನು ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಪುರಸಭಾ ಮುಖ್ಯಾಧಿಕಾರಿ ಹೇಮಂತರಾಜು ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಚಾಮರಾಜನಗರ ಹಾಗೂ ಪುರಸಭೆ ಗುಂಡ್ಲುಪೇಟೆ ಮತ್ತು ಲೀಡ್ ಬ್ಯಾಂಕ್ ಚಾಮರಾಜನಗರ ಸಹಯೋಗದೊಂದಿಗೆ ದೀನ್ ದಯಾಳ್ ಅಂತ್ಯೋದಯ ಯೋಜನೆ ಡೇ-ನಲ್ಮ್ ಅಭಿಯಾನ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಸೇವಾನಿಧಿ ಯೋಜನೆಯಡಿ ಸ್ವ-ನಿಧಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ 2020-2021ನೇ ಸಾಲಿನಲ್ಲಿ ಜಾರಿಗೆ ತರಲಾಗಿ ಮೊದಲ ಹಂತದಲ್ಲಿ ಹತ್ತು ಸಾವಿರ ಕಿರುಸಾಲ ಸೌಲಭ್ಯಕ್ಕೆ 2021-2022ನೇ ಸಾಲಿಗೆ ಒಟ್ಟು ಭೌತಿಕ ಗುರಿ 281 ಗುರಿಯನ್ನು ಹೊಂದಿ ಪಟ್ಟಣದ ವಿವಿಧ ಬ್ಯಾಂಕುಗಳಿಗೆ 287 ಅರ್ಜಿಯನ್ನು ಸಲ್ಲಿಸಲಾಗಿತ್ತು.
ಇಲ್ಲಿನ ಬ್ಯಾಂಕ್ಗಳು 258 ಅರ್ಜಿಗಳಿಗೆ ಮಂಜೂರಾತಿ ನೀಡಿ ಈ ಸಾಲಿನಲ್ಲಿ 226 ಅರ್ಜಿಗಳಿಗೆ ಸಾಲ ಬಿಡುಗಡೆ ಮಾಡಿದೆ. ಮಂಜೂರಾತಿ ಅಗಿರುವ ಅರ್ಜಿಯಲ್ಲಿ
ಬಾಕಿ 32 ಅರ್ಜಿಗಳಿಗೆ ಬ್ಯಾಂಕ್ಗಳು ಸಾಲ ಬಿಡುಗಡೆ ಮಾಡಬೇಕಾಗಿದೆ ಎಂದರು.