Advertisement
ತಾಲೂಕಿನ ಸಾಲಾಪುರ ಗ್ರಾಮದಲ್ಲಿ ನಾಟ್ಯ ಯೋಗ ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆದ ಚಿಣ್ಣರ ಚಿಲುಮೆ ಮಕ್ಕಳ ಸಾಂಸ್ಕೃತಿಕ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಿಕೆ ಯಾಗುತ್ತದೆ ಎಂಬುದನ್ನು ಪಾಲಕರು ಅರಿಯಬೇಕಿದೆ ಎಂದರು. ಮಕ್ಕಳಲ್ಲಿರುವ ಪ್ರತಿಭೆಗೆ
ಸೂಕ್ತ ವೇದಿಕೆ ಕಲ್ಪಿಸುವುದರ ಮೂಲಕ ಪ್ರತಿಭೆ ಹೊರ ಹೊಮ್ಮುವಂತೆ ಮಾಡಲು ಶಾಲಾ ಶಿಕ್ಷಣದಲ್ಲಿಯೂ ಪ್ರತಿಭಾ ಕಾರಂಜಿ ಕ್ರೀಡಾ ಚಟುವಟಿಕೆಗಳು ಹಾಗೂ ಅವುಗಳಿಗೆ ಪೂರಕ ತಯಾರಿ ನೀಡಲು ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕಾಧ್ಯಕ್ಷ ಕೆ.ಎನ್. ಯಡ್ರಾವಿ ಮಾತನಾಡಿ, ಮಕ್ಕಳು ನಾಟಕಗಳಲ್ಲಿ ಅಭಿನಯಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅಭಿನಯ ಅನುಕರಣೆ ಧ್ವನಿ ಏರಿಳಿತ ಮುಂತಾದವು ಶಿಕ್ಷಣಕ್ಕೆ ಪೂರಕವಾದ ಅಂಶಗಳೇ ಆಗಿರುತ್ತವೆ ಎಂದು ಹೇಳಿದರು. ಶಿಬಿರದ ನಿರ್ದೇಶಕ ರಂಗಕರ್ಮಿ ಕಲ್ಲಪ್ಪ ಪೂಜಾರ, ಮಹಿಬೂಬ್ ಬಾಗವಾನ ಶಿಬಿರಾರ್ಥಿಗಳಾದ ಭಾಗ್ಯ ಸಂಸ್ಥೆಯ ಲಕ್ಷ್ಮೀ ದೇವರೆಡ್ಡಿ, ಪ್ರದೀಪ್ ಕಂಬಾರ ಮಾತನಾಡಿದರು. ಶಿಬಿರಾರ್ಥಿಗಳು ನಾಟಕ ಪ್ರದರ್ಶನ ನೀಡಿದರು. ವೇದಿಕೆಯ ಮೇಲೆ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಾ ಹಂಪಿಹೊಳಿ, ಎ.ಎಸ್. ಗಾಣಗಿ, ಎಫ್.ಬಿ ಅರಳಿಮಟ್ಟಿ, ಸಂತೋಷ ಕೋಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಚೇತನ್ ಪೂಜಾರ ಸ್ವಾಗತಿಸಿದರು. ಕೆ.ಟಿ. ಜಾಡರ ನಿರೂಪಿಸಿದರು. ವಿಠ್ಠಲ್ ಕಟಗಿ ವಂದಿಸಿದರು.