Advertisement

ಮಿತಿ ಮೀರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ

12:02 AM Jul 21, 2019 | Team Udayavani |

ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ವಾಹನಗಳಲ್ಲಿ ನಿಗದಿತ ಮಕ್ಕಳ ಸಂಖ್ಯೆಗಿಂತ ಹೆಚ್ಚಿದ್ದರೆ, ಅಂತಹ ಚಾಲಕರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಮಕ್ಕಳ ಹಿತದೃಷ್ಟಿಯಿಂದ ಉತ್ತಮ. ಆದರೆ, ಕೇವಲ ಈ ವಾಹನಗಳಲ್ಲ; ನಗರಾದ್ಯಂತ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಬಸ್‌ನ ಬಾಗಿಲಿನಲ್ಲೇ ಹತ್ತಾರು ಮಕ್ಕಳು ನೇತಾಡಿಕೊಂಡು ತೆರಳುತ್ತಾರೆ.

Advertisement

ಮೊದಲೇ ಅತಿ ವೇಗದಲ್ಲಿರುವ ಬಸ್‌ಗಳಲ್ಲಿ ಹೀಗೆ ಸಂಚರಿಸುವುದು ತೀರಾ ಅಪಾಯಕಾರಿಯಾಗಿದೆ. ಒಂದು ವೇಳೆ ತತ್‌ಕ್ಷಣಕ್ಕೆ ಚಾಲಕ ಬ್ರೇಕ್‌ ಹಾಕಿದರೆ ಬಸ್‌ ನಿಲ್ಲುವ ರಭಸಕ್ಕೆ ಮಕ್ಕಳು ಬೀಳುವ ಸ್ಥಿತಿ ಇದೆ.

ಹಾಗಾಗಿ ಮಕ್ಕಳು ಅಥವಾ ಯಾರನ್ನೇ ಆಗಲಿ, ಬಸ್‌ನ ಬಾಗಿಲಿನಲ್ಲಿ ನೇತಾಡಿಸಿಕೊಂಡು ಹೋಗುವ ಬಸ್‌ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಇದರಿಂದ ಬಸ್‌ನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಹಾಕುವುದು ತಪ್ಪಿಸಬಹುದು.

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next