Advertisement

Terrorism: ತಾಜ್‌ ಉಗ್ರದಾಳಿ ಬೆದರಿಕೆ: ಬಂಧನ

09:54 PM Sep 02, 2023 | Team Udayavani |

ಮುಂಬೈ: 26/11ರ ಮಾದರಿಯಲ್ಲೇ ಮುಂಬೈನ ತಾಜ್‌ ಹೋಟೆಲ್‌ನಲ್ಲಿ ಮತ್ತೂಂದು ಭಯೋತ್ಪಾದಕ ದಾಳಿ ನಡೆಯಲಿದೆ. ಪಾಕಿಸ್ತಾನದ ಇಬ್ಬರು ಉಗ್ರರು ಅದಕ್ಕಾಗಿಯೇ ಜಲ ಮಾರ್ಗದ ಮೂಲಕ ಭಾರತ ತಲುಪಿದ್ದಾರೆ! ಹೀಗೆಂದು ಪೊಳ್ಳು ಬೆದರಿಕೆ ಒಡ್ಡಿ, ಸುಳ್ಳು ಕರೆ ಮಾಡಿದ್ದ ಭೂಪ ಇದೀಗ ಮುಂಬೈ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಗಾಜಿಯಾಬಾದ್‌ ಮೂಲದ ನಿವಾಸಿ ಮುಕೇಶ್‌ ಸಿಂಗ್‌ ಎಂಬ ಹೆಸರಿನಲ್ಲಿ ಪೊಲೀಸ್‌ ಕಚೇರಿಗೆ ಗುರುವಾರ ವ್ಯಕ್ತಿಯೊಬ್ಬ ಕರೆ ಮಾಡಿ ಉಗ್ರದಾಳಿಯ ಬಗ್ಗೆ ಮಾಹಿತಿ ನೀಡಿದ್ದ. ಕೂಡಲೇ ಪೊಲೀಸರು ಭದ್ರತೆ ಹೆಚ್ಚುಗೊಳಿಸಿದ್ದಲ್ಲದೇ, ಕರೆ ಮಾಡಿದವನ ಮೂಲ ಕಂಡುಹಿಡಿಯಲು ಬೆನ್ನತ್ತಿದ್ದಾರೆ. ತನಿಖೆಯಲ್ಲಿ ಕರೆ ಮಾಡಿರುವ ವ್ಯಕ್ತಿ ಮುಂಬೈನ ಗೋಲಿಬಾರ್‌ ರಸ್ತೆಯ ನಿವಾಸಿ ಜಗದಂಬಾ ಪ್ರಸಾದ್‌ ಸಿಂಗ್‌ ಎಂಬುದು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಹುಟ್ಟಿಸಲು ಈ ರೀತಿ ಸುಳ್ಳು ಉಗ್ರದಾಳಿಯ ಬೆದರಿಕೆ ಒಡ್ಡಿದ್ದಾನೆಂಬುದು ಬಳಿಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next