Advertisement

ತಹಶೀಲ್ದಾರ್‌ ಮೇಲೆ ಹಲ್ಲೆ ಖಂಡಿಸಿ ಮನವಿ

01:16 PM Feb 06, 2022 | Team Udayavani |

ದೇವದುರ್ಗ: ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವಂತಹ ವ್ಯಕ್ತಿಗಳನ್ನು ಸರ್ಕಾರ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಮುಖಂಡ ಚನ್ನವೀರಯ್ಯ ಸ್ವಾಮಿ ಹಿರೇಮಠ ಆಗ್ರಹಿಸಿದರು.

Advertisement

ಹುಮನಾಬಾದ ತಹಶೀಲ್ದಾರ್‌ ಪ್ರದೀಪ್‌ ಕುಮಾರ್‌ ಹಿರೇಮಠ ಅವರ ಮೇಲೆ ಬಿಎಸ್‌ಪಿ ಪಕ್ಷದ ಕಾರ್ಯಕರ್ತರು ಅಮಾನುಷ್ಯವಾಗಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಅರಕೇರಾ ಗ್ರಾಮದಲ್ಲಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ನಾಡ ಕಾರ್ಯಾಲಯಕ್ಕೆ ತೆರಳಿ, ನಾಡ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಘಟಕ ಅಧ್ಯಕ್ಷ ಚಂದ್ರಶೇಖರ ಪಾಟೀಲ್‌, ಪ್ರಧಾನ ಕಾರ್ಯದರ್ಶಿ ಪ್ರಕಾಶ ಪಾಟೀಲ್‌, ಹೋಬಳಿ ಘಟಕದ ಅಧ್ಯಕ್ಷ ವಿಶ್ವನಾಥ ಹೊಸಮನಿ, ಪ್ರಧಾನ ಕಾರ್ಯದರ್ಶಿ ಕೆ.ಹೊಳೆಪ್ಪ, ರಾಚಯ್ಯ ಸ್ವಾಮಿ ಮಠಪತಿ, ಚಂದ್ರಶೇಖರ ಶೆಟ್ಟಿ, ಜಿ.ಬೂದೆಪ್ಪ ಸಾಹುಕಾರ, ಮಲ್ಲಪ್ಪ ಸಾಹುಕಾರ, ಶಂಕ್ರಪ್ರ ಸಾಹುಕಾರ ಮಂದಕಲ್‌, ಮಲ್ಲಿಕಾರ್ಜುನ ಸಾಹುಕಾರ ಗುಡಿ, ಗಂಗಯ್ಯ ಸ್ವಾಮಿ, ಶರಣಯ್ಯ ಸ್ವಾಮಿ, ಚನ್ನಬಸವ ಗುಡಿ, ಯಮುನಪ್ಪ ಕುಂಬಾರ, ಸೂಗಪ್ಪ ಕುಂಬಾರ, ಶರಣಬಸವ ನಾಗೋಲಿ, ಡಾ| ಶಿವಕುಮಾರ ನಾಡಗೌಡ, ಸೂಗಪ್ಪ ಅತ್ನೂರು, ಬೂದೆಪ್ಪ ತೆಗ್ಗಿನಮನೆ, ಅಮರೇಶ ಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next