Advertisement

ಟಿ. ಸತೀಶ್‌ ಯು. ಪೈ ಅವರಿಗೆ ಪತ್ರಿಕಾ ದಿನದ ಗೌರವ

01:28 AM Jun 27, 2019 | Sriram |

ಉಡುಪಿ: ಬೆಂಗಳೂರಿನ ಪತ್ರಕರ್ತರ ವೇದಿಕೆಯ “ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದನ್ವಯ ಪತ್ರಿಕಾ ದಿನದ ಪ್ರಯುಕ್ತ ಹಿರಿಯ ಪತ್ರಿಕೋದ್ಯಮಿ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ ಅವರಿಗೆ 2019ರ ಪತ್ರಿಕಾ ದಿನದ ಗೌರವ ನೀಡಲಾಗುವುದು ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

Advertisement

ಮಣಿಪಾಲದ ಅನಂತ ನಗರದಲ್ಲಿರುವ ಸತೀಶ್‌ ಪೈ ಅವರ ನಿವಾಸದಲ್ಲಿ ಜೂ. 30ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಈ ಗೌರವ ಪ್ರದಾನಿಸಲಿದ್ದಾರೆ. ಹಿರಿಯ ಸಂಗೀತ ತಜ್ಞ ಉಡುಪಿ ನಾದವೈಭವಂ ವಾಸುದೇವ ಭಟ್‌, ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಹಿರಿಯ ಸಾಹಿತಿ ಕು.ಗೋ., ಹಿರಿಯ ಶಿಕ್ಷಣ ತಜ್ಞ ಎ. ನರಸಿಂಹ, ಸಂಘಟಕ ಭುವನಪ್ರಸಾದ್‌ ಹೆಗ್ಡೆ ಸಹಿತ ಗಣ್ಯರು ಉಪಸ್ಥಿತರಿರುತ್ತಾರೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next