Advertisement

ಬೈಕಿಗೆ ಡಿಕ್ಕಿ ಹೊಡೆದು ಸವಾರನನ್ನು 1ಕಿ.ಮೀ. ದೂರ ಎಳೆದೊಯ್ದ ಕಾರು: ಬೈಕ್ ಸವಾರ ದುರ್ಮರಣ

03:56 PM Jan 05, 2023 | Team Udayavani |

ನವದೆಹಲಿ: ದೆಹಲಿಯ ಸುಲ್ತಾನ್ ಪುರಿ ಮಾದರಿಯಲ್ಲೇ ನೋಯ್ಡಾದಲ್ಲೊಂದು ಅಪಘಾತ ಸಂಭವಿಸಿದ್ದು ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರನನ್ನು ಸುಮಾರು 1 ಕಿಲೋ ಮೀಟರ್ ದೂರದ ವರೆಗೆ ಎಳೆದೊಯ್ದ ಘಟನೆ ಕಳೆದ ಭಾನುವಾರ ಸಂಭವಿಸಿದೆ.

Advertisement

ರಸ್ತೆ ಅಪಘಾತದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ತನ್ನ ಜೀವ ಕಳೆದುಕೊಂಡಿದ್ದು ಅಪಘಾತ ನಡೆಸಿದ ಕಾರು ಚಾಲಕ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಮೃತ ಯುವಕನನ್ನು ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಕೌಶಲ್ ಯಾದವ್ ಎನ್ನಲಾಗಿದೆ.

ಕಳೆದ ಭಾನುವಾರ ಸ್ವಿಗ್ಗಿ ಆಹಾರ ವಿತರಣೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿ ಕೌಶಲ್ ಯಾದವ್ ಅವರು ಹೊಸ ವರ್ಷದ ರಾತ್ರಿ 1 ಗಂಟೆ ಸುಮಾರಿಗೆ ನೋಯ್ಡಾದ ಸೆಕ್ಟರ್ 14 ಫ್ಲೈ ಓವರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್‌ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ, ಕಾರು ಸವಾರನನ್ನು ಸುಮಾರು 1 ಕಿಲೋಮೀಟರ್ ದೂರದವರೆಗೆ ಎಳೆದೊಯ್ದು ಕಾರನ್ನು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಘಟನೆ ಕುರಿತು ಕೌಶಲ್ ಕುಟುಂಬದವರು 1ನೇ ಹಂತದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಲ್ಲಿ ಹೊಸ ವರ್ಷದಂದು ಕೌಶಲ್ ಮನೆಗೆ ಬಾರದೆ ಇದ್ದುದನ್ನು ಕಂಡು ಮನೆಯವರು ಕೌಶಲ್ ಮೊಬೈಲ್ ಗೆ ಕರೆ ಮಾಡಿದಾಗ ಬೇರೆ ಯಾರೋ ಕರೆ ಸ್ವೀಕರಿಸಿ ಆತನಿಗೆ ಶನಿ ದೇವಸ್ಥಾನದ ಬಳಿ ಅಪಘಾತವಾಗಿದೆ ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ ಈತನ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹೋದಾಗ ಅಪಘಾತವಾಗಿರುವುದು ಗೊತ್ತಾಗಿದೆ.

Advertisement

ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದ್ದು ಅಪಘಾತವೆಸಗಿದ ಕಾರಿನ ಮೂಲ ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಎನ್‍ಐಎ ದಾಳಿ; ಇಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next