Advertisement

ಒಡಿಶಾ ಜತೆ ಸಿಹಿ ಸಮರ: ಬಂಗಾಲಕ್ಕೆ ರಸಗುಲ್ಲ !

06:00 AM Nov 15, 2017 | Team Udayavani |

ಕೋಲ್ಕತಾ/ಚೆನ್ನೈ: ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು’ ಹೀಗೆಂದು ಎರಡು ವರ್ಷಗಳಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಲ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದವು. ಈಗ ಅವೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ರಸಗುಲ್ಲ ಪಶ್ಚಿಮ ಬಂಗಾಲದ ಸಾಂಪ್ರ ದಾಯಿಕ ತಿನಿಸು ಎಂದು ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಸಂಸ್ಥೆ ತಿಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಬೆಳವಣಿಗೆ ಖುಷಿ ತಂದಿದೆ.

Advertisement

ಈ “ಸಿಹಿ ಸಮರ’ದ ಹಿಂದೆ 2 ವರ್ಷಗಳ ರೋಚಕ ಕತೆಯಿದೆ. 2015ರಲ್ಲಿ ಒಡಿಶಾ ಸರಕಾರ ರಸಗುಲ್ಲವನ್ನು  ಸಾಂಪ್ರದಾಯಿಕ ಸಿಹಿಯೆಂದು ಘೋಷಿಸಲು ಮುಂದಾಯಿತು. ಅದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಆಕ್ಷೇಪ ಮಾಡಿ, ತಗಾದೆ ತೆಗೆಯಿತು. ಆದರೆ ಹಠಬಿಡದ ಒಡಿಶಾ, ರಸಗುಲ್ಲ ಮೂಲವನ್ನು ಕೆದಕಲು ಹಲವು ಸಮಿತಿಗಳನ್ನು ರಚಿಸಿತು. ಜು. 30ರಂದು “ರಸಗುಲ್ಲ ದಿನ’ ಎಂದು  ಆಚರಿಸುವುದಾಗಿಯೂ ಘೋಷಿಸಿತು.

ಇದಕ್ಕೆ ಪ್ರತಿಯಾಗಿ, ಪಶ್ಚಿಮ ಬಂಗಾಲವೂ ರಸಗುಲ್ಲ ಮೂಲ ಪತ್ತೆಗೆ ಸಮಿತಿ ರಚಿಸಿತು. 1868ರಲ್ಲಿ ನಬೀನ್‌ ಚಂದ್ರದಾಸ್‌ ಎಂಬ ಪ್ರಖ್ಯಾತ ಬಾಣಸಿಗ ಅದನ್ನು ಆವಿಷ್ಕರಿಸಿದರು ಎನ್ನುವ ಅಂಶವನ್ನು ಕಂಡುಕೊಂಡಿತು. ಜತೆಗೆ ಪಶ್ಚಿಮ ಬಂಗಾಲ ಮತ್ತು ಒಡಿಶಾ ಜಿಐ ರಿಜಿಸ್ಟ್ರಿ ಕಚೇರಿಗೆ ರಸಗುಲ್ಲ ಮೇಲೆ ತಮ್ಮ ಹಕ್ಕುಸ್ವಾಮ್ಯ ಸಾಧಿಸಲು ಅಹವಾಲು ಸಲ್ಲಿಸಿದ್ದವು.

ಒಡಿಶಾ ಮುಂದಿಟ್ಟಿದ್ದ  ವಾದವೇನು ?
“ರಸಗುಲ್ಲ’ ತನ್ನದೆಂದು ಹೇಳಲು ಒಡಿಶಾ ಸರಕಾರ ಪುರಾಣದ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡಿತ್ತು. ಒಡಿಶಾದಲ್ಲಿರುವ ಪುರಿಯ ಜಗನ್ನಾಥ ದೇಗುಲದಲ್ಲಿ ನೆಲೆನಿಂತಿದ್ದ ಶ್ರೀ ಜಗನ್ನಾಥನು ತನ್ನ ಪತ್ನಿಯಾದ ಲಕ್ಷ್ಮೀಯ ಸಮ್ಮತಿಯಿಲ್ಲದೇ 9 ದಿನಗಳ ರಥಯಾತ್ರೆಗೆ ಹೋಗಿಬಂದಿದ್ದ. ಆಗ ಮುನಿಸಿಕೊಂಡಿದ್ದ ಲಕ್ಷ್ಮೀಯು ದೇಗುಲದ ಬಾಗಿಲನ್ನು ತೆರೆಯದೆ ಸತಾಯಿಸಿದ್ದಳು. ಆಕೆಯ ಮನವೊಲಿಸುವ ಸಲುವಾಗಿ ರಸಗುಲ್ಲ ಸೃಷ್ಟಿಸಿಕೊಟ್ಟಿದ್ದ. ಇದರ ಕುರುಹಾಗಿ ಈಗಲೂ ಪುರಿ ದೇಗುಲದಲ್ಲಿ  ನೈವೇದ್ಯಕ್ಕೆ ರಸಗುಲ್ಲಗಳನ್ನೇ ಇಡುವ ಸಂಪ್ರದಾಯ ಶತಮಾನಗಳಿಂದ ಚಾಲ್ತಿಯಲ್ಲಿದೆ. ಹಾಗಾಗಿ, ಈ ಸಿಹಿ ನಮ್ಮದೇ ಎಂದು ಒಡಿಶಾ ವಾದ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next