Advertisement

ಸುಮಲತಾ ಪರ ಕೆಲಸ ಮಾಡಿಲ್ಲವೆಂದು ಆಣೆ ಮಾಡಿ

11:26 PM May 14, 2019 | Team Udayavani |

ಮಳವಳ್ಳಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿಲ್ಲ ಎಂದು ಮಲೆ ಮಹದೇಶ್ವರನ ಮೇಲೆ ಪ್ರಮಾಣ ಮಾಡಿ ಎಂದು ಶಾಸಕ ಕೆ.ಅನ್ನದಾನಿ ಅವರು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿಗೆ ಸವಾಲು ಹಾಕಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. “ಚುನಾವಣೆಯಲ್ಲಿ ನೀವು ಸುಮಲತಾ ಪರ ಕೆಲಸ ಮಾಡಿರುವುದು ನೂರಕ್ಕೆ ನೂರರಷ್ಟು ಸತ್ಯ. ಇದು ಸುಳ್ಳು ಅಂತಾ ಹೇಳುವುದಾದರೆ ಮೊದಲು ಹೋಗಿ ಮಲೆ ಮಹದೇಶ್ವರನ ಮೇಲೆ ಪ್ರಮಾಣ ಮಾಡಿ ಬನ್ನಿ.

ನಂತರ, ನಾನು ಹೋಗಿ ಪ್ರಮಾಣ ಮಾಡಿ ಬರ್ತೀನಿ. ನೀವು ಯಾವಾಗಲೂ ನಿಮ್ಮ ಹಣೆಯ ಮೇಲೆ ಮಹದೇಶ್ವರನ ಮೇಲಿನ ಭಕ್ತಿಯಿಂದ ಬೊಟ್ಟು ಇಡ್ತೀರಾ, ಅದಕ್ಕೆ ಒಂದು ಬೆಲೆ ಸಿಗಲಿ. ಮೊದಲು ಹೋಗಿ ಪ್ರಮಾಣ ಮಾಡಿ ಬನ್ನಿ’ ಎಂದು ನರೇಂದ್ರಸ್ವಾಮಿಗೆ ಬಹಿರಂಗ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next