Advertisement

ಆಪರೇಷನ್‌ ಮಾಡಿಲ್ಲ ಎಂದು ಪ್ರಮಾಣ ಮಾಡಿ: ಶಿವಲಿಂಗೇಗೌಡ

01:00 AM Jul 23, 2019 | Team Udayavani |

ಬೆಂಗಳೂರು: “ಬಿಜೆಪಿಯವರು ಆಪರೇಷನ್‌ ಕಮಲ ಮಾಡಿಲ್ಲ ಎಂದು ಧರ್ಮಸ್ಥಳ ಮಂಜುನಾಥನ ಎದುರು ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡಲಿ,’ ಎಂದು  ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಸವಾಲು ಹಾಕಿದರು. ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, “ರಾಜಿನಾಮೆ ಸಲ್ಲಿಸಿ ಮುಂಬೈಗೆ  ತೆರಳಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹದಿನೈದು ಶಾಸಕರನ್ನು ತಾವು ಕರೆದುಕೊಂಡು ಹೋಗಿಲ್ಲ ಎಂದು ಬಿಜೆಪಿಯವರು ಆತ್ಮಸಾಕ್ಷಿಯಾಗಿ ಹೇಳಲಿ,’ ಎಂದು ಆಗ್ರಹಿಸಿದರು.

Advertisement

ಒಂದು ಪಕ್ಷದ ಚಿನ್ಹೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬರಲು ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂದು ನಮಗೆ ಗೊತ್ತು. ಈ ರೀತಿ ಶಾಸಕರನ್ನು  ಹಾರಿಸಿಕೊಂಡು ಹೋದರೆ ಪ್ರಜಾಪ್ರಭುತ್ವದ ಗತಿ ಏನಾಗಬೇಕು. ನಾನು ಅಪ್ಪನಿಗೆ ಹುಟ್ಟಿದವನು. ನಾನು ಯಾವ ಪಕ್ಷದಿಂದ ಗೆದ್ದಿದ್ದೇನೋ ಅದೆ  ಪಕ್ಷದಲ್ಲಿರುತ್ತೇನೆ ಎಂದರು. ಆಗ ಬಿಜೆಪಿ ಸದಸ್ಯ ಬಸವರಾಜ್‌ ಬೊಮ್ಮಾಯಿ ಮಧ್ಯ ಪ್ರವೇಶಿಸಿ, “ನಿಮಗೆ ಅನುಮಾನ ಇದೀಯಾ’ ಎಂದು ಆಕ್ಷೇಪಾರ್ಹ ಪದ  ಬಳಕೆ ಮಾಡಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಬೊಮ್ಮಾಯಿ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌  ರಮೇಶ್‌ ಕುಮಾರ್‌ ಮಧ್ಯ ಪ್ರವೇಶಿಸಿ, ಬಹುಮತ ಸಾಬೀತು ಪಡಿಸುವ ಸಮಯ ನಿಗದಿ ಪಡಿಸುವಂತೆ ಆಡಳಿತ ಪಕ್ಷದ ಸದಸ್ಯರಿಗೆ ಸೂಚಿಸಿ, ಮಂಗಳವಾರ ಸಂಜೆ 6 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಲು ರೂಲಿಂಗ್‌ ನೀಡಿ ಸದನವನ್ನು ಮಂಗಳವಾರ 10 ಗಂಟೆಗೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next