Advertisement

ಬೋಗಿಗಳಲ್ಲಿ ಸ್ವತ್ಛ ಭಾರತ ಚಿಹ್ನೆ

10:54 AM Aug 27, 2018 | |

ಹೊಸದಿಲ್ಲಿ: ಇದೇ ಅ.2ರಿಂದ ಮುಂದಿನ ವರ್ಷ ಅಕ್ಟೋಬರ್‌ 2ರವರೆಗೆ ನಡೆಯಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮಶತಾಬ್ದಿವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಭಾರತೀಯ ರೈಲ್ವೇ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ರೈಲ್ವೇ ಬೋಗಿಗಳ ಮೇಲೆ ಸ್ವತ್ಛ ಭಾರತ ಅಭಿಯಾನದ ಚಿಹ್ನೆ ಹಾಗೂ ರಾಷ್ಟ್ರಧ್ವಜದ ಚಿತ್ರಗಳನ್ನು ಅಂಟಿಸಲಾಗುತ್ತದೆ.

Advertisement

ಬೆಂಗಳೂರಿನ ರೈಲು ನಿಲ್ದಾಣ ಸೇರಿದಂತೆ, ಗಾಂಧೀಜಿ ಭೇಟಿ ನೀಡಿದ್ದ ಅಥವಾ ಅವರ ಜೀವನಕ್ಕೆ ನಂಟು ಹೊಂದಿ ರುವ 43 ನಿಲ್ದಾಣಗಳನ್ನು ಗುರುತು ಮಾಡಲಾಗಿದ್ದು, ಇವುಗಳಿಗೆ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡ ಲಾಗುತ್ತದೆ. 
ಇದಲ್ಲದೆ, ಎಲ್ಲಾ ನಿಲ್ದಾಣಗಳಲ್ಲಿ  ಗಾಂಧಿಯ ಅಹಿಂಸೆ, ಐಕ್ಯತೆ, ಶುಚಿತ್ವ, ಸ್ವಯಂ ಸೇವೆ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ ಸಿದ್ಧಾಂತಗಳನ್ನು ಸಾರುವ ಸಂದೇಶಗಳು, ಚಿತ್ರಗಳನ್ನು ಬಿಡಿಸಲು, ರೈಲ್ವೇ ಮಾರ್ಗಗಳ ಎರಡೂ ಬದಿಯಲ್ಲಿ ಗಿಡಗಳನ್ನು ನೆಡಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next