Advertisement

ಕೆಲೂರ- ಶಿವಗಂಗಾ ಶ್ರೀಗಳಿಗೆ ಸಾತ್ವಿಕ ಪ್ರಶಸ್ತಿ

06:36 PM Sep 28, 2021 | Team Udayavani |

ಅಮೀನಗಡ: ಖ್ಯಾತ ಸಾಹಿತಿ ಲಿಂ|| ಶ್ರೀ ಟಿ.ಆರ್. ಮಹದೇವಯ್ಯನವರ ಹೆಸರಿನಲ್ಲಿ ಪ್ರತಿವರ್ಷ ಕೊಡುವ ಪ್ರಸ್ತುತ 2021 ನೇ ಸಾಲಿನ ಸಾತ್ವಿಕ ಪ್ರಶಸ್ತಿಗೆ ಕೆಲೂರ-ಶಿವಗಂಗಾ ಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಶ್ರೀಗಳು ಆಯ್ಕೆಯಾಗಿದ್ದಾರೆ.

Advertisement

ಪ್ರಶಸ್ತಿಯು 20 ಸಾವಿರ ನಗದು ಹಾಗೂ ಸ್ಮರಣೆ ಫಲಕವನ್ನು ಒಳಗೊಂಡಿದೆ. ನ.13 ರಂದು ಶ್ರೀಮೇಲಣಗವಿ ಮಠದಲ್ಲಿ ನಡೆಯುವ ಕಾರ್ತೀಕ ದೀಪೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರುವುದು.

ಸಮಾರಂಭದ ಸಾನಿಧ್ಯವನ್ನು ಮೌನ ತಪಸ್ವಿ ಜಡೆಯ ಶಾಂತ ಲಿಂಗೇಶ್ವರ ಸ್ವಾಮಿಗಳು ವಹಿಸಲಿದ್ದುˌ ಬೆಂಗಳೂರಿನ ವಿಭೂತಿಪುರ ಮಠದ ಶ್ರೀಗಳು.ಶಿವಗಂಗಾ ಕ್ಷೇತ್ರದ ಹೊನ್ನಮ್ಮಗವಿ ಮಠದ ಶ್ರೀಗಳ ಸಮ್ಮುಖದಲ್ಲಿ ಸಮಾರಂಭ ನೆರವೇರಲಿದೆ. ನಾಡಿನ ಖ್ಯಾತ ಉಪನ್ಯಾಸಕರಾದ  ಗುರುರಾಜ ಖರ್ಜಗಿ ಅವರು ಉಪನ್ಯಾಸ ನೀಡಲಿದ್ದಾರೆ. ಸಮಾಜದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಗುವುದು. ನಾಡಿನ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯ್ಕೆ ಸಮಿತಿಯ ಬೆಂಗಳೂರಿನ ಬಸವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಹೆಚ್.ವಿ.ರಾಜಣ್ಣ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next