Advertisement

ಸಿನಿಮಾ ಬಗ್ಗೆ ಸ್ವಾಮೀಜಿ ಮಾತು

06:00 AM Jan 22, 2019 | |

ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಈ ಹಿಂದೆ ಜಿ.ಮೂರ್ತಿ ನಿರ್ದೇಶನದ “ಸಿದ್ಧಗಂಗಾ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲ, ಆ ಚಿತ್ರ ವೀಕ್ಷಿಸುವ ಮೂಲಕ ತಮಗಿರುವ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿಯನ್ನೂ ತೋರಿಸಿದ್ದರು.

Advertisement

ಅಂದು “ಸಿದ್ಧಗಂಗಾ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಶ್ರೀಗಳು, ಚಿತ್ರರಂಗ ಮತ್ತು ಕನ್ನಡ ಚಿತ್ರಗಳ ಕುರಿತು ಮಾತನಾಡಿದ್ದರು. “ಅನಾಗರಿಕ ಮನುಷ್ಯ ಕ್ರಮೇಣ ನಾಗರಿಕನಾಗುತ್ತಾ ಬಂದ. ಈಗ ಸಮಾಜದಲ್ಲಿ ಮೊದಲ ಸ್ಥಾನದಲ್ಲಿದ್ದಾನೆ. ಎಲ್ಲಾ ಕ್ಷೇತ್ರದಲ್ಲೂ ಕೈ ಹಾಕಿ ಯಶಸ್ಸು ಕಂಡಿದ್ದಾನೆ.

ಹಲವು ಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದು ಒಂದಷ್ಟು ಪ್ರಗತಿಗೆ ಕಾರಣನಾಗಿದ್ದಾನೆ. ಈ ಚಿತ್ರರಂಗದ ಮೂಲಕ ಎಲ್ಲವನ್ನೂ ಹೇಳಲು ಸಾಧ್ಯವಿದೆ. ಒಳ್ಳೆಯ ಸಂದೇಶವಿರುವ ಚಿತ್ರಗಳನ್ನು ಕೊಡುವುದರ ಜತೆಯಲ್ಲಿ ಸಮಾಜದಲ್ಲಿರುವ ಭ್ರಷ್ಟತೆಯನ್ನು ಹೋಗಲಾಡಿಸುವಲ್ಲಿಯೂ ಮುಂದಾಗುವ ಅಗತ್ಯವಿದೆ’ ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next