Advertisement

ಸ್ವಾಮಿ “ಅಗ್ನಿಪ್ರವೇಶ’ಕ್ಕೆ ತಡೆ

11:34 PM Jun 16, 2019 | Sriram |

ಭೋಪಾಲ್‌: ಇತ್ತೀಚೆಗಿನ ಭೋಪಾಲ್‌ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಸೋತಿದ್ದಕ್ಕೆ ಅಗ್ನಿಪ್ರವೇಶ ಮಾಡಿ ದೇಹತ್ಯಾಗ ಮಾಡುವುದಾಗಿ ತಿಳಿಸಿದ್ದ ಸ್ವಾಮಿ ವೈರಾಗ್ಯಾನಂದ ಅವರ ಪ್ರಯತ್ನಕ್ಕೆ ತಡೆ ಹಾಕಲಾಗಿದೆ. ರವಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆಯಬೇಕಿದ್ದ ಈ ವಿದ್ಯಮಾನವನ್ನು ಪೊಲೀಸರ ನಿಯೋಜನೆಯಿಂದ ತಪ್ಪಿಸಲಾಗಿದೆ. ಈ ಬಾರಿ ದಿಗ್ವಿಜಯ್‌ ಸಿಂಗ್‌ ಸೋತರೆ ಅಗ್ನಿ ಪ್ರವೇಶ ಮಾಡುವುದಾಗಿ ಸ್ವಾಮಿ ಚುನಾವಣೆಗೂ ಮುನ್ನ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಮಾತು ತಪ್ಪಿದ್ದಾರೆ ಎಂದು ಕೆಲವರು ಕುಹಕವಾಡಿದ್ದರಿಂದ ಸ್ವಾಮೀಜಿ ಅಗ್ನಿಪ್ರವೇಶಕ್ಕೆ ಮುಂದಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next