Advertisement

ಸ್ವಾಮಿ ಅಗ್ನಿವೇಶ್‌ ಮೇಲೆ ಹಲ್ಲೆ

09:55 AM Jul 18, 2018 | Team Udayavani |

ಪುಕುರ್‌: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ (79) ಮೇಲೆ ಬಿಜೆಪಿ ಯುವ ಮೋರ್ಚಾ ಮತ್ತು ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜಾರ್ಖಂಡ್‌ ನ‌ಲ್ಲಿ ಮಂಗಳವಾರ ನಡೆದಿದೆ. ಅಗ್ನಿವೇಶ್‌ ಇಲ್ಲಿಯ ಲಿಟ್ಟಿಪಾರದಲ್ಲಿ ಬುಡಕಟ್ಟು ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ದೈಹಿಕವಾಗಿ ಹಿಂಸಿಸಲಾಗಿದೆ. ಪುಕುರ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಲ್ಲಿಂದ ಹೊರಬರುತ್ತಲೇ ದೊಡ್ಡ ಗುಂಪು ಅವರ ಮತ್ತು ಸಂಗಡಿಗರ ಮೇಲೆ ದಾಳಿ ನಡೆಸಿತು.

Advertisement

ಈ ಕುರಿತು ಮಾತನಾಡಿರುವ ಅಗ್ನಿವೇಶ್‌, ‘ಸುದ್ದಿಗೋಷ್ಠಿ ನಡೆದ ಸ್ಥಳದಿಂದ ಹೊರಬರುತ್ತಲೇ ನನ್ನ ಮೇಲೆ ಬಿಜೆಪಿ, ಎಬಿವಿಪಿ ಕಾರ್ಯಕರ್ತರು ಯಾವುದೇ ಪ್ರಚೋದನೆ ಇಲ್ಲದೇ ದಾಳಿ ನಡೆಸಿದರು. ನಾನು ಹಿಂದೂ ವಿರೋಧಿ ಎಂದು ಆರೋಪಿಸಿದರು’ ಎಂದಿದ್ದಾರೆ. ಅಗ್ನಿವೇಶ್‌ ನಮ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವ ಕುರಿತು ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇದನ್ನು ಅಗ್ನಿವೇಶ್‌ ತಳ್ಳಿಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next