Advertisement

ಮತ್ತೆ ಟಿಎಂಸಿಗೆ ಸೇರಲಿದ್ದಾರೆಯೇ ಸುವೇಂದು ಅಧಿಕಾರಿ?

09:06 PM Oct 24, 2022 | Team Udayavani |

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರು ಇತ್ತೀಚೆಗೆ ಟಿಎಂಸಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಮತ್ತೆ ಟಿಎಂಸಿ ಸೇರಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ.

Advertisement

ಸುವೇಂದು ಶನಿವಾರ ಬೀರ್‌ಭೂಮ್‌ ಜಿಲ್ಲೆಯ ಬಾಮ್ನಿ ಕಾಳಿ ದೇಗುಲಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ ಸೂರಿ ನಗರ ಪಾಲಿಕೆಯ ಇಬ್ಬರು ಟಿಎಂಸಿ ಕೌನ್ಸಿಲರ್‌ಗಳೂ ಇದ್ದರು. ಈ ಮೂರೂ ನಾಯಕರು ದೇಗುಲದಲ್ಲಿ ಪರಸ್ಪರ ಮಾತನಾಡಿಕೊಂಡಿದ್ದಾರೆ.

ಆ ಫೋಟೋವನ್ನು ಸುವೇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕೌನ್ಸಿಲರ್‌ಗಳು ಪ್ರತಿಕ್ರಿಯಿಸಿದ್ದು, “ನಾವು ದೇವಸ್ಥಾನದಲ್ಲಿದ್ದಾಗ ಅವರೂ ಬಂದರು. ನಮ್ಮ ಪಕ್ಷದಲ್ಲಿದ್ದವರು ಎನ್ನುವ ಭಾವನೆಯಿಂದ ಮಾತನಾಡಿಸಿದ್ದೇವೆ’ ಎಂದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬಾ ಸಹಾ ಅವರು ಪ್ರತಿಕ್ರಿಯಿಸಿದ್ದು, “ನಮ್ಮ ಪಕ್ಷ ಸೇರಲು ಟಿಎಂಸಿಯವರು ನಮ್ಮ ಹಿಂದೆ ಬಿದ್ದಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next