Advertisement

ಅಕ್ಟೋಬರ್ 18 ರಂದು ಸವರ್ಣದೀರ್ಘ ಸಂಧಿ ಬಿಡುಗಡೆ

10:06 AM Oct 15, 2019 | Naveen |

ಮಂಗಳೂರು: ವೀರು ಟಾಕೀಸ್ ಮತ್ತು ಲೈಲಾಕ್ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಸವರ್ಣದೀರ್ಘ ಸಂಧಿ ಸಿನಿಮಾ ಇದೇ ಅಕ್ಟೋಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ವೀರೇಂದ್ರ ಶೆಟ್ಟಿ ತಿಳಿಸಿದರು.

Advertisement

ನಗರದಲ್ಲಿ ಸೋಮವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದ ಅವರು ಈ ಸಿನಿಮಾದಲ್ಲಿ ಹಿರಿಯ ನಟಿ ವಿನಯ ಪ್ರಸಾದ್ ಅವರ ಸಹೋದರನ ಮಗಳಾದ ಕೃಷ್ಣಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ (ಪಿವಿಆರ್) ಮನೋಮೂರ್ತಿ, ವಿರೇಂದ್ರ ಶೆಟ್ಟಿ ಸೇರಿದಂತೆ ನಾಲ್ಕು ಜನ ನಿರ್ಮಾಪಕರನ್ನು ಹೊಂದಿರುವ ಈ ಸಿನಿಮಾಗೆ ಮನೋಮೂರ್ತಿಯವರ ಸಂಗೀತವಿದೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್, ಶಶಿಕಲಾ ಸುನೀಲ್, ವಿಧಿಷಾ ವಿಶ್ವಾಸ್ ಅವರ ಹಿನ್ನಲೆ ಗಾಯನ ಈ ಚಿತ್ರಕ್ಕಿದೆ.

ಉಸ್ತಾದ್ ಹೊಟೇಲ್ ಖ್ಯಾತಿಯ ಛಾಯಗ್ರಾಹಕ ಲೋಗನಾಥನ್ ಶ್ರೀನಿವಾಸನ್ ಕ್ಯಾಮಾರ ಈ ಸಿನಿಮಾಕ್ಕಿದೆ. ಸಂಕೇತ್ ಶಿವಪ್ಪ ಸಂಕಲನ ಮಾಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next