Advertisement

Brahmavar; ಅನುಮಾನಾಸ್ಪದ ರೀತಿಯಲ್ಲಿ ಕೂಲಿ ಕಾರ್ಮಿಕ ಸಾವು

12:52 AM Jan 28, 2024 | Team Udayavani |

ಬ್ರಹ್ಮಾವರ: ಕೂಲಿ ಕಾರ್ಮಿಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಜ. 25ರಂದು ಯಡ್ತಾಡಿಯಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಸಂತೋಷ (28) ಮೃತ ಕೂಲಿ ಕಾರ್ಮಿಕ.

Advertisement

ಈತ ಕೂಲಿ ಕೆಲಸದ ಬಗ್ಗೆ ಶಿರ್ವ ಮಂಚಕಲ್‌ ಕಡೆಗೆ ಹೋಗಿದ್ದು ಅಲ್ಲಿಂದ ಅಪರಿಚಿತ ವ್ಯಕ್ತಿಯೋರ್ವರು ಜ.25ರಂದು ಕರೆ ಮಾಡಿ ಸಂತೋಷ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಆಬಳಿಕ ಪರಿಚಿತರಾದ ವಿಜಯ್‌ ಎನ್ನುವವರು ಮೂರ್ನಾಲ್ಕು ಮಂದಿಯೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ಮನೆಗೆ ತಂದು ಹೋಗಿದ್ದರು.

ಹೀಗಾಗಿ ಸಂತೋಷ್‌ ಅವರ ಮರಣದಲ್ಲಿ ಅನುಮಾನವಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಹೆತ್ತವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next