Advertisement

ಹೊಸಬರ ಥ್ರಿಲ್ಲರ್‌

11:39 AM Dec 28, 2017 | Sharanya Alva |

ಗಾಂಧಿನಗರಕ್ಕೆ ಹೊಸದಾಗಿ ಬರುವವರ ಫೆವರೇಟ್‌ ಜಾನರ್‌ ಅಂದರೆ ಅದು ಹಾರರ್‌-ಥ್ರಿಲ್ಲರ್‌ ಎಂದರೆ ತಪ್ಪಲ್ಲ. ಆ ಜಾನರ್‌ನಲ್ಲೇ ಕಥೆ ಮಾಡಿಕೊಂಡು ಬರುತ್ತಾರೆ. ಈ ಆ ಸಾಲಿಗೆ ಮತ್ತೊಂದು ತಂಡ ಕೂಡಾ ಸೇರಿಕೊಂಡಿದೆ. ಹೊಸಬರೇ ಸೇರಿಕೊಂಡು ಮಾಡುತ್ತಿರುವ ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇತ್ತೀಚೆಗೆ ಮುಹೂರ್ತ ವಾಗಿದೆ. ವಿಕ್ರಮ್‌ ಎನ್ನುವವರು ಈ ಚಿತ್ರದ ನಿರ್ದೇಶಕರು.

Advertisement

ಸಿ.ಎಸ್‌.ಚಂದ್ರಶೇಖರ್‌ ನಿರ್ಮಾಣದ ಈ ಚಿತ್ರದಲ್ಲಿ ಸಂಪೂರ್ಣ ಹೊಸಬರೇ ನಟಿಸುತ್ತಿದ್ದಾರೆ. ನಿರ್ದೇಶಕ ವಿಕ್ರಮ್‌ ಹೇಳುವಂತೆ, ಚಿತ್ರ ಥ್ರಿಲ್ಲರ್‌ ಹಿನ್ನೆಲೆಯಲ್ಲಿ ಕೂಡಿದ್ದು, ಕಥೆ ಕೂಡಾ ಹೊಸತನ ದಿಂದ ಕೂಡಿದೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಮಾಡಿರುವುದರಿಂದ ಜನ ಸಿನಿಮಾವನ್ನು
ಇಷ್ಟಪಡುತ್ತಾರೆಂಬ ವಿಶ್ವಾಸ ಅವರಿಗಿದೆ.

ಚಿತ್ರದಲ್ಲಿ ಅಂಜನ್‌ (ವಾಸುದೇವ್‌), ಹರೀಶ್‌ ರಾಜ್‌, ಅಭಿಷೇಕ್‌, ರಾಘವ್‌ ಚಂದ್ರ, ಅಭಿ, ಮನು, ಶಶಿಕಲಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರವಿ ಮಂಜು ಅವರ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಚಿತ್ರದ ಚಿತ್ರೀಕರಣ ಜನವರಿ ಮೂರನೇ ವಾರದಿಂದ ಆರಂಭವಾಗಲಿದ್ದು, ಬೆಂಗಳೂರು, ದಾಂಡೇಲಿ ಸುತ್ತಮುತ್ತ ನಡೆಯಲಿದೆ. ಚಿತ್ರದ ಟೈಟಲ್‌ ಇನ್ನಷ್ಟೇ ಆಗಬೇಕಿದ್ದು, ಆ್ಯಕ್ಷನ್‌ ಹಿನ್ನೆಲೆಯ ಟೈಟಲ್‌ ಇರುತ್ತದೆ ಎನ್ನುವುದು ವಿಕ್ರಮ್‌ ಮಾತು. ಚಿತ್ರಕ್ಕೆ ವಿನಯ್‌ ಶರ್ಮಾ ಸಂಗೀತ, ಸುರೇಶ್‌ ಮುತ್ತು ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next