Advertisement

Suspend: ಕರ್ತವ್ಯಲೋಪ: 16 ಶಿಕ್ಷಕರ ಅಮಾನತು

11:25 PM Apr 07, 2023 | Team Udayavani |

ಬೀದರ್‌: ಎಸೆಸೆಲ್ಸಿ ಪರೀಕ್ಷೆ ಕಾರ್ಯದಲ್ಲಿ ಲೋಪ ಹಾಗೂ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಪರೀûಾ ಕರ್ತವ್ಯ ನಿರ್ವಹಿಸಿರುವ 16 ಶಿಕ್ಷಕರನ್ನು ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸರಕಾರದ ವಿವಿಧ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ಒಟ್ಟು 9 ಶಿಕ್ಷಕರು ಹಾಗೂ ಅನುದಾನಿತ ವಿವಿಧ ಶಿಕ್ಷಣ ಸಂಸ್ಥೆಗಳಡಿ ಶಾಲೆಗಳ 7 ಸೇರಿದಂತೆ ಒಟ್ಟು 16 ಜನ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಡಿಡಿಪಿಐ ಸಲಿಂ ಪಾಷಾ ಅಮಾನತುಗೊಳಿಸಿ ಆದೇಶಿಸಿದ್ದು, ಅನುದಾನಿತ ಶಾಲೆಗಳ 7 ಜನ ಶಿಕ್ಷಕರನ್ನು ಅಮಾನತುಗೊಳಿಸುವಂತೆ ಆಯಾ ಸಂಸ್ಥೆಗಳಿಗೆ ಇಲಾಖೆಯು ಪತ್ರ ಬರೆದು ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next