Advertisement

ಶಂಕಿತ ನಿಪ ಪ್ರಕರಣ:ಇಂದು ಪ್ರಯೋಗಾಲಯ ವರದಿ ಕೈಸೇರುವ ಸಾಧ್ಯತೆ

06:20 AM May 31, 2018 | Team Udayavani |

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಮೂವರು ಅರೆವೈದ್ಯ ಸಿಬ್ಬಂದಿಯಲ್ಲಿ ನಿಪ ಲಕ್ಷಣಗಳು ಕಂಡು
ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಪ್ರಯೋಗಾಲಯದ ವರದಿ ಗುರುವಾರ ಆರೋಗ್ಯ ಇಲಾಖೆಗೆ ಲಭ್ಯವಾಗುವ ಸಾಧ್ಯತೆ ಇದೆ.

Advertisement

15 ದಿನಗಳ ಹಿಂದೆ ಕೇರಳಕ್ಕೆ ತೆರಳಿ ವಾಪಸ್ಸಾಗಿದ್ದ ಮೂವರು ಅರೆವೈದ್ಯ ಸಿಬ್ಬಂದಿಯಲ್ಲಿ ಜ್ವರ, ತಲೆನೋವು ಕಾಣಿಸಿಕೊಂಡು ನಿಪ ರೋಗದ ಲಕ್ಷಣಗಳು ಕಂಡು ಬಂದಿದ್ದವು. ತಕ್ಷಣವೇ ಅವರಿಗೆ ಪ್ರತ್ಯೇಕ ನಿಗಾ ವ್ಯವಸ್ಥೆ ಕಲ್ಪಿಸಲಾಗಿತ್ತು.ಅವರ ರಕ್ತದ ಮಾದರಿ, ಮೂಗು ಮತ್ತು ಗಂಟಲಿನ ದ್ರವವನ್ನು ಮಣಿಪಾಲ್‌ ಆಸ್ಪತ್ರೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಯೋಗಾಲಯದ ವರದಿ ಗುರುವಾರ ಕೈಸೇರುವ ಸಾಧ್ಯತೆ ಇದೆ. ವರದಿ ಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೂ ಕಳುಹಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next