Advertisement

ಕೊಲೆ ಪ್ರಕರಣ: ಸುಶೀಲ್‌ ಬಂಧನ

02:33 AM May 24, 2021 | Team Udayavani |

ಹೊಸದಿಲ್ಲಿ: ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್‌ ಪಂಜಾಬ್‌ನ ಭಟಿಂಡಾದಲ್ಲಿ ಶನಿವಾರ ಬಂಧನಕ್ಕೊಳಗಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿ ಯಾಗಿ ತಲೆಮರೆಸಿಕೊಂಡಿದ್ದ ಅವರನ್ನು ಬಂಧಿಸಲು ಕಡೆಗೂ ದಿಲ್ಲಿ ಪೊಲೀಸರು ಯಶಸ್ವಿಯಾದರು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಹೊಸದಿಲ್ಲಿಗೆ ಒಯ್ಯಲಾಗಿದೆ.

Advertisement

ಹೊಸದಿಲ್ಲಿಯ ಛತ್ರಸಾಲ ಮೈದಾನದಲ್ಲಿ ಮೇ 4ರ ರಾತ್ರಿ ನಡೆದ ಯುವ ಕುಸ್ತಿಪಟು ಸಾಗರ್‌ ರಾಣಾ ಕೊಲೆ ಪ್ರಕರಣದಲ್ಲಿ ಸುಶೀಲ್‌ ಹೆಸರು ಕೇಳಿಬಂದಿತ್ತು. ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಅವರು ಈ ಹತ್ಯೆ ಮಾಡಿದ್ದಾರೆಂಬುದು ಸುಶೀಲ್‌ ಮೇಲಿನ ಆರೋಪವಾಗಿತ್ತು. ಬಳಿಕ ಸುಶೀಲ್‌ ತಲೆಮರೆಸಿಕೊಂಡಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನೂ ಸಲ್ಲಿಸಿದ್ದರು.

ಇದನ್ನು ದಿಲ್ಲಿ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು. ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚು, ಲಂಡನ್‌ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಸುಶೀಲ್‌ ಅವರನ್ನು ಲಕ್ಷಾಂತರ ಭಾರತೀಯರು ಆರಾಧಿಸುತ್ತಿದ್ದರು. ಈಗ ತಮ್ಮ ಹೆಸರು ಕೆಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next