Advertisement

Kannada Cinema; ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಸೂರಿ ಲವ್ಸ್‌ ಸಂಧ್ಯಾ’

05:36 PM Dec 29, 2023 | Team Udayavani |

ಕೆಲವು ಸಿನಿಮಾಗಳು ತನ್ನ ಶೀರ್ಷಿಕೆ ಮೂಲಕವೇ ಗಮನ ಸೆಳೆಯುತ್ತವೆ. ಟೈಟಲ್‌ ಕೇಳಿದಾಗ ಈ ಚಿತ್ರದೊಳಗೆ ಏನೋ ಒಂದು ವಿಭಿನ್ನತೆ ಇರಬಹುದು ಎಂಬ ಫೀಲ್‌ ಬರುವುದು ಸಹಜ. ಸದ್ಯ ಆ ತರಹದ ಒಂದು ಫೀಲ್‌ನೊಂದಿಗೆ ತೆರೆಗೆ ಬರಲು ಸಿದ್ಧವಾಗಿರುವ ಚಿತ್ರ “ಸೂರಿ ಲವ್ಸ್‌ ಸಂಧ್ಯಾ’.

Advertisement

ಕಾಶೀನಾಥ್‌ ಪುತ್ರ ಅಭಿಮನ್ಯು ನಾಯಕರಾಗಿರುವ ಈ ಚಿತ್ರದಲ್ಲಿ ಅಪೂರ್ವ ನಾಯಕಿ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. 7 ಕ್ರೋರ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ನಡಿ ಈ ಚಿತ್ರವನ್ನು ಕೆ.ಟಿ.ಮಂಜುನಾಥ್‌ ಅವರು ನಿರ್ಮಿಸುತ್ತಿದ್ದಾರೆ. ಯಾದವ್‌ ರಾಜ್‌ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜೊತೆಗೆ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಟೈಟಲ್‌ ಕೇಳಿದಾಗಲೇ ಇದೊಂದು ಲವ್‌ಸ್ಟೋರಿ ಎನ್ನುವುದು ಗೊತ್ತಾಗುತ್ತದೆ. ಹಾಗಾದರೆ ಯಾವ ತರಹದ ಲವ್‌ಸ್ಟೋರಿ ಎಂಬ ಪ್ರಶ್ನೆ ಬರುತ್ತದೆ. ಈ ಕುರಿತು ಮಾತನಾಡುವ ನಿರ್ದೇಶಕ ಯಾದವ್‌ ರಾಜ್‌, “ಸೂರಿ ಲವ್ಸ್‌ ಸಂಧ್ಯಾ ಒಂದು ಸರಳ ಪ್ರೇಮಕಥೆ. ಇಡೀ ಸಿನಿಮಾ ನೈಜವಾಗಿ ಸಾಗುತ್ತದೆ. ಯಾವುದೇ ಅಬ್ಬರವಿಲ್ಲ ದೇ ಸಾಗುವ ಕಥೆಯಲ್ಲಿ ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಬಂದು ಪ್ರೇಕ್ಷಕರ ಕುತೂಹಲ ಹೆಚ್ಚಿಸುವುದು ಸುಳ್ಳಲ್ಲ. ಇಡೀ ಸಿನಿಮಾ ತುಂಬಾ ಸೊಗಸಾಗಿ ಮೂಡಿಬಂದಿದೆ. ಸಿನಿಮಾದ ಮುಹೂರ್ತ ದಿನ ನಾನೊಂದು ಮಾತು ಹೇಳಿದ್ದೆ, “ನಿರ್ಮಾಪಕರು ಈ ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಅದರಂತೆ ಈಗ ಸಿನಿಮಾ ಮುಗಿದಿದೆ. ಸಿನಿಮಾ ಮೂಡಿಬಂದಿರುವ ರೀತಿ ಬಗ್ಗೆ ನಿರ್ಮಾಪಕರು ಖುಷಿಯಾಗಿದ್ದಾರೆ. ಒಂದು ಸಿನಿಮಾವನ್ನು ನೀಟಾಗಿ ಕಟ್ಟಿಕೊಡೋದು ನಮ್ಮ ಜವಾಬ್ದಾರಿ. ಹಾಗಂತ ನಾನು ಯಾರೂ ಮಾಡದಂತಹ ಸಿನಿಮಾ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಅಂತಿಮವಾಗಿ ಒಂದು ಸಿನಿಮಾದ ನಿರ್ಣಯ ಪ್ರೇಕ್ಷಕರಲ್ಲಿ ಕೈಯಲ್ಲಿ ಇರುತ್ತದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next