Advertisement

ಮುಂದಿನೆರಡು ಪಂದ್ಯಗಳಿಗೆ ರೈನಾ ಇಲ್ಲ

06:15 AM Apr 13, 2018 | |

ಚೆನ್ನೈ: ಸತತ ಎರಡೂ ಪಂದ್ಯದಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆಘಾತವೊಂದು ಎದುರಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಸ್ನಾಯು ಸೆಳೆತದಿಂದ ಮುಂದಿನೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ.

Advertisement

ಕೆಕೆಆರ್‌ ವಿರುದ್ಧ ಬ್ಯಾಟಿಂಗ್‌ ಮಾಡುವಾಗ ರೈನಾ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದರು. ಹೀಗಾಗಿ ಮುಂದಿನ ಎರಡು ಪಂದ್ಯಗಳಿಗೆ ಲಭಿಸುವುದಿಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದರಿಂದಾಗಿ ಎ. 15ರ ಪಂಜಾಬ್‌ ವಿರುದ್ಧ ಮತ್ತು ಎ. 20ರ ರಾಜಸ್ಥಾನ್‌ ವಿರುದ್ಧದ ಪಂದ್ಯಗಳಿಗೆ ರೈನಾ ಲಭಿಸುವುದಿಲ್ಲ. ಇದಕ್ಕೂ ಮುನ್ನ ಚೆನ್ನೈ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಕೂಡ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next