Advertisement

ಸುರೇಶ್‌ ಭಯ್ನಾಜಿ ಜೋಷಿ 4ನೇ ಬಾರಿ ಆರ್‌ಎಸ್‌ಎಸ್‌ ಸರಕಾರ್ಯವಾಹ

07:03 PM Mar 10, 2018 | Team Udayavani |

ಹೊಸದಿಲ್ಲಿ : ಸುರೇಶ್‌ (ಭಯ್ನಾಜಿ) ಜೋಷಿ ಅವರನ್ನು ನಾಲ್ಕನೇ ಬಾರಿಗೆ ಮೂರು ವರ್ಷಗಳ ಅವಧಿಯ  ಸರಕಾರ್ಯವಾಹ  (ಪ್ರಧಾನ ಕಾರ್ಯದರ್ಶಿ) ಹುದ್ದೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುನರಾಯ್ಕೆ ಮಾಡಿದೆ. 

Advertisement

ಆರ್‌ಎಸ್‌ಎಸ್‌ ಸಂಘಟನೆಯ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುವ ಅಖೀಲ ಭಾರತೀಯ ಪ್ರತಿನಿಧಿ ಸಭಾ, ಸುರೇಶ್‌ ಜೋಷಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಲ್ಕನೇ ಬಾರಿ ಚುನಾಯಿಸಿತು.

ಮುಂದಿನ ಮೂರು ವರ್ಷಗಳ ಕಾರ್ಯ ಸ್ವರೂಪವನ್ನು ಮತ್ತು ಕಾರ್ಯ ಸೂಚಿಯನ್ನು ರೂಪಿಸಲು ಆರ್‌ಎಸ್‌ಎಸ್‌ ನ ತ್ತೈವಾರ್ಷಿಕ ಸಭೆ ನಿನ್ನೆ ಶುಕ್ರವಾರ  ನಡೆಯಿತು. 

ರಾಷ್ಟ್ರೀಯ ಸ್ವಯಂ ಸೇವಗ ಸಂಘದಲ್ಲಿ  ಪರಮೋಚ್ಚ  ಸರಸಂಘಚಾಲಕ ಮೋಹನ್‌ ಭಾಗವತ್‌ ಅವರ ಅನಂತರದ ಎರಡನೇ ಸ್ಥಾನವೇ ಸರಕಾರ್ಯವಾಹ ಅವರದ್ದಾಗಿದೆ. ಸುರೇಶ್‌ ಜೋಷಿ ಅವರು ಈ ಬಾರಿ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಬೇಕೆಂಬ ಹಂಬಲ ವ್ಯಕ್ತಪಡಿಸಿದದ್ದರು. ಆದರೂ ಆರ್‌ಎಸ್‌ಎಸ್‌ ಅವರನ್ನು ನಾಲ್ಕನೇ ಬಾರಿ ಸರಕಾರ್ಯವಾಹ ಹುದ್ದೆಗೆ ಪುನರಾಯ್ಕೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next