Advertisement
ಒಂದೂವರೆ ತಿಂಗಳಿಂದ ಕಾಮಗಾರಿ ಬಿರುಸಿನಿಂದಲೇ ನಡೆಯುತ್ತಿತ್ತು. ಸದ್ಯ 5.5 ಮೀ. ಅಗಲವಿರುವ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಯೋಜನೆ ಇದಾಗಿದ್ದು, ರಸ್ತೆಯ ಬದಿಗಳಲ್ಲಿ ಅಗೆದು, ಜಲ್ಲಿ ರಾಶಿ ಹಾಕಿದ್ದಾರೆ. ಇನ್ನೂ ಕೆಲವು ಕಡೆ ಜಲ್ಲಿ-ಮಣ್ಣು ಹಾಸಲಾಗಿದೆ. ಕೆಲವು ಕಡೆ ಹೊಂಡವನ್ನು ಹಾಗೆಯೇ ಬಿಡಲಾಗಿದೆ.
ಗುತ್ತಿಗೆದಾರರು ಈ ರಸ್ತೆಯ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಎಲ್ಲ ಯಂತ್ರಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಇದರಿಂದಾಗಿ ಕಾಮಗಾರಿ ಇಷ್ಟಕ್ಕೇ ನಿಲ್ಲುತ್ತದೆಯೇ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿದೆ.
Related Articles
ಗುತ್ತಿಗೆದಾರರು ಅರ್ಧದಲ್ಲೇ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲವು ಕಡೆ ಜಲ್ಲಿ ಹಾಕಿ ಹಾಗೇ ಬಿಟ್ಟು ಹೋಗಿದ್ದಾರೆ. ಅದನ್ನು ರಸ್ತೆಗೆ ಹಾಕಿ, ಮಣ್ಣು ಹರಡಿಲ್ಲ. ಜಲ್ಲಿ ಅಭಾವ ಇದ್ದರೆ ಕೆಲಸ ಬಾಕಿ ಇಟ್ಟು ಹೋಗುವುದು ಸರಿಯಲ್ಲ. ತಕ್ಷಣ ಸಂಬಂಧಪಟ್ಟವರ ಗಮನ ಸೆಳೆದು, ಕಾಮಗಾರಿ ಮುಂದುವರಿಸಲು ಒತ್ತಾಯಿಸುತ್ತೇನೆ ಎಂದರು
Advertisement
ಜಲ್ಲಿ ಕಲ್ಲು ಕೊರತೆಎಂಜಿನಿಯರ್ ಪ್ರೀತಂ ಅವರನ್ನು ಸಂಪರ್ಕಿಸಿದರೆ, ಈ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸಮಸ್ಯೆಯಾಗಿರುವುದು ನಿಜ. ಗುತ್ತಿಗೆದಾರರನ್ನು ಈ ಕುರಿತು ಪ್ರಶ್ನಿಸಿದ್ದು, ಜಲ್ಲಿ ಕಲ್ಲಿನ ಸಮಸ್ಯೆಯಿಂದ ಕಾಮಗಾರಿ ನಿಂತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ, ರಸ್ತೆ ಬದಿಯ ಹೊಂಡಗಳನ್ನಾದರೂ ತತ್ಕ್ಷಣ ಮುಚ್ಚುವಂತೆ ಸೂಚಿಸಿದ್ದೇನೆ. ವಿಳಂಬ ಮಾಡಿದರೆ, ಇಲಾಖೆ ವತಿಯಿಂದಲೇ ಮಾಡಲಾಗುವುದು ಎಂದರು. ಉಮ್ಮರ್ ಜಿ. ಕಬಕ