Advertisement

ಸುರತ್ಕಲ್‌: ಟೋಲ್‌ಗೇಟ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ,ಎರಡು ದೂರು ದಾಖಲು

09:02 PM Oct 20, 2022 | Team Udayavani |

ಸುರತ್ಕಲ್‌: ಸುರತ್ಕಲ್‌ನಲ್ಲಿ ಅ.18ರಂದು ಟೋಲ್‌ ತೆರವಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪೂರ್ವಾನುಮತಿ ಪಡೆಯದೆ ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟನೆ ಮಾಡಿ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಆರೋಪ ಎದುರಾಗಿದ್ದು 25ಕ್ಕೂ ಹೆಚ್ಚಿನ ಮಂದಿಯ ವಿರುದ್ದ ದೂರು ದಾಖಲಾಗಿದೆ.

Advertisement

ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರಕ್ಟರ್‌ ಲಿಂಗೇಗೌಡ ಅವರು ಈ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದರೂ ಬಳಿಕ ಬೆಳಿಗ್ಗೆ 10.15ರಿಂದ 11.45ರವರೆಗೆ ಹೆದ್ದಾರಿ ತಡೆ ಮಾಡಿದ್ದಾರೆ ಎಂದು ದೂರಲಾಗಿದೆ.

ಟೋಲ್‌ ಸಂಗ್ರಹ ಗುತ್ತಿಗೆದಾರನಿಂದಲೂ ದೂರು!:

ಟೋಲ್‌ ಸಂಗ್ರಹ ಗುತ್ತಿಗೆದಾರ ನೂರ್‌ಮಹಮ್ಮದ್‌ ಕಂಪನಿಯಿಂದಲೂ ಪ್ರತಿಭಟನೆ ಮಾಡಿದವರ ಮೇಲೆ ದೂರು ದಾಖಲಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಮ್ಯಾನೇಜರ್‌ ಶಿಶುಪಾಲ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next