Advertisement

Surathkal: ಎರಡು ಕಾರು , ಮೊಬೈಲ್‌ ಕದ್ದ ಆರೋಪಿಯ ಬಂಧನ

04:54 PM Jul 25, 2023 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪದ ಹೊಸಬೆಟ್ಟು ಬಳಿ ಸೆಕೆಂಡ್‌ ಹ್ಯಾಂಡ್‌ ವಾಹನ ಮಾರಾಟ ಮಳಿಗೆಯಿಂದ ಎರಡು ಕಾರು , ಮೊಬೈಲ್‌, ಪ್ರಿಂಟರ್‌ ಸಹಿತ ವಸ್ತುಗಳನ್ನು ಕದ್ದ ಆರೋಪಿ ಕಿನ್ನಿಪದವು ನಿವಾಸಿ ಮಹಮ್ಮದ್‌ ಶಫೀಕ್‌ (21) ಎಂಬಾತನನ್ನು ಬಂಧಿಸಲಾಗಿದೆ.

Advertisement

ವಶ ಪಡಿಸಿಕೊಂಡಿರುವ ವಾಹನಗಳ ಒಟ್ಟು ಮೌಲ್ಯ ಅಂದಾಜು 15.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಿದ ಸಲಕರಣೆ, ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಜು.12ರಂದು ರಾತ್ರಿ ಸಮಯ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್‌ ಮಾರ್ಟ್‌ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್‌ ನ ಡೋರ್‌ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಮಾಡಿ ಒಳಪ್ರವೇಶಿಸಿ , ಮೊಬೈಲ್‌ ಫೋನ್‌, ಲ್ಯಾಪ್‌ ಟಾಪ್‌, ಪ್ರಿಂಟರ್‌ ಹಾಗೂ ಶೋರೂಂನ ಪಾರ್ಕ ನಲ್ಲಿ ನಿಲ್ಲಿಸಿದ ಕ್ರೆಟಾ, ಸ್ವಿಫ್ಟ್‌ ಕಾರು ಕಳವು ಮಾಡಿದ್ದರು.

ಕಾರ್‌ ಮಾರ್ಟ್‌ ಮಾಲಕರಾದ ಅಬೀದ್‌ ಅಹಮ್ಮದ್‌ ಸೂರಲ್ಪಾಡಿ ಇವರು ನೀಡಿದ ದೂರಿನಂತೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳ್ಳರ ಬೆನ್ನತ್ತಿದ ಪೊಲೀಸರು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಳವಾದ ಸ್ವಿಪ್ಟ್ ಕಾರು ವಶ ಪಡೆದು ತನಿಖೆ ನಡೆಸಿದಾಗ ಪ್ರಧಾನ ಆರೋಪಿ ಮಹಮ್ಮದ್‌ ಶಫೀಕ್‌ ಮರಕಡ ಬಳಿ ಬರುವ ಸೂಚನೆ ಲಭಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈತನ ಮೇಲೆ ಮೂಡಬಿದ್ರೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಗೈದ ಪ್ರಕರಣವಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ಮೂರು ದಿನಗಳ ಕಸ್ಟಡಿ ನೀಡಲಾಗಿದೆ.

ಹಿರಿಯ ಆಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌, ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್‌, ಅರುಣ್‌ ಕುಮಾರ್‌, ಎಎಸ್‌ಐ, ತಾರನಾಥ ಹೆಡ್‌ ಕಾನ್ಸಟೇಬಲ್‌ ಗಳಾದ ಅಣ್ಣಪ್ಪ, ಉಮೇಶ್‌, ಕಾನ್ಸಟೇಬಲ್‌ ಗಳಾದ ಕಾರ್ತೀಕ್‌, ಸುನೀಲ್‌, ಮಂಜುನಾಥ, ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next